إعدادات العرض
ಯಾರು ಅಲ್ಲಾಹನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದೆ ಅವನನ್ನು ಭೇಟಿಯಾಗುತ್ತಾರೋ, (ಅವರು ಮಾಡಿದ) ಪಾಪವು ಅವರಿಗೆ…
ಯಾರು ಅಲ್ಲಾಹನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದೆ ಅವನನ್ನು ಭೇಟಿಯಾಗುತ್ತಾರೋ, (ಅವರು ಮಾಡಿದ) ಪಾಪವು ಅವರಿಗೆ ಹಾನಿಯುಂಟುಮಾಡುವುದಿಲ್ಲ. ಯಾರು ಅವನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾ ಮರಣ ಹೊಂದುತ್ತಾರೋ, (ಅವರು ಮಾಡಿದ) ಸತ್ಕರ್ಮವು ಅವರಿಗೆ ಪ್ರಯೋಜನ ನೀಡುವುದಿಲ್ಲ
ಅಬ್ದುಲ್ಲಾ ಇಬ್ನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಅಲ್ಲಾಹನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದೆ ಅವನನ್ನು ಭೇಟಿಯಾಗುತ್ತಾರೋ, (ಅವರು ಮಾಡಿದ) ಪಾಪವು ಅವರಿಗೆ ಹಾನಿಯುಂಟುಮಾಡುವುದಿಲ್ಲ. ಯಾರು ಅವನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾ ಮರಣ ಹೊಂದುತ್ತಾರೋ, (ಅವರು ಮಾಡಿದ) ಸತ್ಕರ್ಮವು ಅವರಿಗೆ ಪ್ರಯೋಜನ ನೀಡುವುದಿಲ್ಲ."
الترجمة
العربية Português دری Македонски Magyar Tiếng Việt ქართული Kurdî বাংলা ไทย অসমীয়া Nederlands ਪੰਜਾਬੀ Indonesia Kiswahili ភាសាខ្មែរ English ગુજરાતી Hausa Tagalog Русский മലയാളം मराठी Српски සිංහලالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿರುವುದೇನೆಂದರೆ, ಯಾರು ಏಕದೇವಾರಾಧಕನಾಗಿ, ಅಲ್ಲಾಹನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡದೆ ಮರಣಹೊಂದಿ ಅಲ್ಲಾಹನನ್ನು ಭೇಟಿಯಾಗುತ್ತಾನೋ, ಅವನು ಸ್ವರ್ಗವಾಸಿಗಳಲ್ಲಿ ಸೇರಿದವನಾಗುತ್ತಾನೆ; ಒಂದು ವೇಳೆ ಅವನು ಮಾಡಿದ ಪಾಪಕ್ಕಾಗಿ ಅವನಿಗೆ ನರಕದಲ್ಲಿ (ತಾತ್ಕಾಲಿಕವಾಗಿ) ಶಿಕ್ಷೆಯಾದರೂ ಸರಿ (ಕೊನೆಗೆ ಸ್ವರ್ಗ ಸೇರುತ್ತಾನೆ). ಯಾರು ಅಲ್ಲಾಹನೊಂದಿಗೆ ಏನನ್ನಾದರೂ ಸಹಭಾಗಿತ್ವ ಮಾಡುತ್ತಾ (ಶಿರ್ಕ್ ಮಾಡುತ್ತಾ) ಮರಣ ಹೊಂದುತ್ತಾನೋ, ಆ ಶಿರ್ಕ್ನೊಂದಿಗೆ ಅವನ ಸತ್ಕರ್ಮವು ಅವನಿಗೆ ಪ್ರಯೋಜನ ನೀಡುವುದಿಲ್ಲ; ಮತ್ತು ಸ್ವರ್ಗವು ಅವನ ಪಾಲಿಗೆ ನಿಷಿದ್ಧವಾಗಿದೆ (ಹರಾಮ್).فوائد الحديث
ಶಿರ್ಕ್ (ಬಹುದೇವಾರಾಧನೆ) ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಅದು ಅತ್ಯಂತ ದೊಡ್ಡ ಪಾಪ ಮತ್ತು ಅಪರಾಧವಾಗಿದೆ. ಅಲ್ಲಾಹು ಅದನ್ನು (ಶಿರ್ಕ್ ಸ್ಥಿತಿಯಲ್ಲಿ ಮೃತಪಟ್ಟವನನ್ನು) ಕ್ಷಮಿಸುವುದಿಲ್ಲ.
ತೌಹೀದ್ನ (ಏಕದೇವಾರಾಧನೆಯ) ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಇದು ಸ್ವರ್ಗ ಪ್ರವೇಶಕ್ಕೆ ಕಾರಣವಾಗುತ್ತದೆ; (ಪಾಪಗಳಿದ್ದರೆ) ಶಿಕ್ಷೆಗೆ ಒಳಗಾದ ನಂತರವಾದರೂ ಸರಿ (ಸ್ವರ್ಗ ಸಿಗುತ್ತದೆ).
ಮರಣದವರೆಗೂ ತೌಹೀದ್ನಲ್ಲಿ ಸ್ಥಿರವಾಗಿರುವುದರ ಮತ್ತು ಅದರ ವಿರುದ್ಧವಾದ ಶಿರ್ಕ್ ಅನ್ನು ಎಸಗದೆ ಇರುವುದರ ಮಹತ್ವವನ್ನು ತಿಳಿಸಲಾಗಿದೆ.
