ನಾವು ಕೊನೆಯ ಸಮುದಾಯವಾಗಿದ್ದೇವೆ, ಆದರೆ ವಿಚಾರಣೆ ನಡೆಸಲ್ಪಡುವವರಲ್ಲಿ ಮೊದಲಿಗರಾಗಿದ್ದೇವೆ

ನಾವು ಕೊನೆಯ ಸಮುದಾಯವಾಗಿದ್ದೇವೆ, ಆದರೆ ವಿಚಾರಣೆ ನಡೆಸಲ್ಪಡುವವರಲ್ಲಿ ಮೊದಲಿಗರಾಗಿದ್ದೇವೆ

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾವು ಕೊನೆಯ ಸಮುದಾಯವಾಗಿದ್ದೇವೆ, ಆದರೆ ವಿಚಾರಣೆ ನಡೆಸಲ್ಪಡುವವರಲ್ಲಿ ಮೊದಲಿಗರಾಗಿದ್ದೇವೆ. (ಪುನರುತ್ಥಾನ ದಿನದಂದು) ಹೇಳಲಾಗುವುದು: 'ಅನಕ್ಷರಸ್ಥ ಸಮುದಾಯ ಮತ್ತು ಅವರ ಪ್ರವಾದಿ ಎಲ್ಲಿದ್ದಾರೆ?'. ಹೀಗೆ ನಾವು ಕೊನೆಯವರು ಮತ್ತು (ವಿಚಾರಣೆಯಲ್ಲಿ) ಮೊದಲಿಗರಾಗಿದ್ದೇವೆ".

[صحيح] [رواه ابن ماجه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿರುವುದೇನೆಂದರೆ, ಅಸ್ತಿತ್ವ ಮತ್ತು ಕಾಲಘಟ್ಟದ ಆಧಾರದಲ್ಲಿ ಅವರ ಸಮುದಾಯವು (ಉಮ್ಮತ್) ಕೊನೆಯ ಸಮುದಾಯವಾಗಿದೆ. ಆದರೆ, ತೀರ್ಪು ನೀಡುವ ದಿನದಂದು (ಪುನರುತ್ಥಾನ) ವಿಚಾರಣೆಗೆ ಒಳಪಡುವ ಸಮುದಾಯಗಳಲ್ಲಿ ಇದು ಮೊದಲನೆಯದಾಗಿರುತ್ತದೆ. ಆ ದಿನ ಹೀಗೆ ಕರೆಯಲಾಗುತ್ತದೆ: "ಅನಕ್ಷರಸ್ಥ ಸಮುದಾಯ ಮತ್ತು ಅವರ ಪ್ರವಾದಿ ಎಲ್ಲಿದ್ದಾರೆ?". ಇಲ್ಲಿ 'ಉಮ್ಮೀ' (ಅನಕ್ಷರಸ್ಥರು) ಎಂದು ಕರೆಯಲು ಕಾರಣ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಓದು-ಬರಹ ಬಲ್ಲವರಾಗಿರಲಿಲ್ಲ. ಅವರಿಗೆ ಸೇರಿಸಿ ಅವರ ಸಮುದಾಯವನ್ನು ಕೂಡ ಹಾಗೆಯೇ ಕರೆಯಲಾಗಿದೆ. ಹೀಗೆ ಅವರನ್ನು ವಿಚಾರಣೆಗಾಗಿ ಮೊದಲು ಕರೆಯಲಾಗುತ್ತದೆ. ಆದ್ದರಿಂದ ನಾವು ಕಾಲದಲ್ಲಿ ಕೊನೆಯವರಾಗಿದ್ದರೂ, ಪುನರುತ್ಥಾನ ದಿನದ ವಿಚಾರಣೆಯಲ್ಲಿ ಮತ್ತು ಸ್ವರ್ಗ ಪ್ರವೇಶಿಸುವುದರಲ್ಲಿ ಮೊದಲಿಗರಾಗಿದ್ದೇವೆ.

فوائد الحديث

ಹಿಂದಿನ ಸಮುದಾಯಗಳಿಗಿಂತ ಈ ಸಮುದಾಯಕ್ಕೆ (ಮುಸ್ಲಿಮ್ ಉಮ್ಮತ್) ಇರುವ ಶ್ರೇಷ್ಠತೆ ಮತ್ತು ಆದ್ಯತೆಯನ್ನು ಇದು ತಿಳಿಸುತ್ತದೆ.

التصنيفات

The Hereafter Life