إعدادات العرض
'ಬಿರ್' (ಒಳಿತು/ಪುಣ್ಯ) ಎಂದರೆ ಉತ್ತಮ ನಡತೆ. 'ಇಸ್ಮ್' (ಪಾಪ) ಎಂದರೆ ಯಾವುದು ನಿನ್ನ ಮನಸ್ಸಿನಲ್ಲಿ ಸಂಶಯವನ್ನುಂಟುಮಾಡುತ್ತದೆಯೋ (ಅಥವಾ…
'ಬಿರ್' (ಒಳಿತು/ಪುಣ್ಯ) ಎಂದರೆ ಉತ್ತಮ ನಡತೆ. 'ಇಸ್ಮ್' (ಪಾಪ) ಎಂದರೆ ಯಾವುದು ನಿನ್ನ ಮನಸ್ಸಿನಲ್ಲಿ ಸಂಶಯವನ್ನುಂಟುಮಾಡುತ್ತದೆಯೋ (ಅಥವಾ ಚುಚ್ಚುತ್ತದೆಯೋ), ಮತ್ತು ಜನರು ಅದರ ಬಗ್ಗೆ ತಿಳಿದುಕೊಳ್ಳುವುದನ್ನು ನೀನು ಇಷ್ಟಪಡುವುದಿಲ್ಲವೋ ಅದು
ನವ್ವಾಸ್ ಇಬ್ನ್ ಸಿಮ್ಆನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "'ಬಿರ್' (ಒಳಿತು/ಪುಣ್ಯ) ಎಂದರೆ ಉತ್ತಮ ನಡತೆ. 'ಇಸ್ಮ್' (ಪಾಪ) ಎಂದರೆ ಯಾವುದು ನಿನ್ನ ಮನಸ್ಸಿನಲ್ಲಿ ಸಂಶಯವನ್ನುಂಟುಮಾಡುತ್ತದೆಯೋ (ಅಥವಾ ಚುಚ್ಚುತ್ತದೆಯೋ), ಮತ್ತು ಜನರು ಅದರ ಬಗ್ಗೆ ತಿಳಿದುಕೊಳ್ಳುವುದನ್ನು ನೀನು ಇಷ್ಟಪಡುವುದಿಲ್ಲವೋ ಅದು". ವಾಬಿಸಾ ಇಬ್ನ್ ಮಅಬದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದೆನು. ಆಗ ಅವರು ಹೇಳಿದರು: "ನೀನು 'ಬಿರ್' (ಒಳಿತು) ಮತ್ತು 'ಇಸ್ಮ್' (ಪಾಪ) ದ ಬಗ್ಗೆ ಕೇಳಲು ಬಂದಿದ್ದೀಯಾ?" ನಾನು ಹೇಳಿದೆನು: "ಹೌದು". ಅವರು ಹೇಳಿದರು: "ನಿನ್ನ ಹೃದಯದೊಂದಿಗೆ ಫತ್ವಾ ಕೇಳು. 'ಬಿರ್' ಎಂದರೆ ಯಾವುದು ಆತ್ಮಕ್ಕೆ ಸಮಾಧಾನ ನೀಡುತ್ತದೆಯೋ, ಮತ್ತು ಹೃದಯಕ್ಕೆ ನೆಮ್ಮದಿ ನೀಡುತ್ತದೆಯೋ ಅದು. 'ಇಸ್ಮ್' ಎಂದರೆ ಯಾವುದು ನಿನ್ನ ಆತ್ಮದಲ್ಲಿ ಸಂಶಯವನ್ನುಂಟುಮಾಡುತ್ತದೆಯೋ ಮತ್ತು ಎದೆಯಲ್ಲಿ ಹಿಂಜರಿಕೆಯನ್ನುಂಟುಮಾಡುತ್ತದೆಯೋ ಅದು, ಜನರು ನಿನಗೆ ಫತ್ವಾ ನೀಡಿದರೂ ಮತ್ತು (ಅದನ್ನು ಮಾಡಲು) ಫತ್ವಾ ನೀಡಿದರೂ ಸಹ".
الترجمة
العربية Español አማርኛ English اردو Indonesia বাংলা Français Türkçe Русский Bosanski සිංහල हिन्दी 中文 فارسی Tiếng Việt Tagalog Kurdî Hausa Português മലയാളം తెలుగు Kiswahili தமிழ் ไทย Deutsch پښتو অসমীয়া Shqip Nederlands ગુજરાતી Кыргызча नेपाली Lietuvių دری Српски тоҷикӣ Kinyarwanda Magyar Čeština Moore Malagasy Oromoo Wolof Azərbaycan O‘zbek Українська ქართული Македонски ភាសាខ្មែរ ਪੰਜਾਬੀ मराठी Kirundi Kurmancî Bahasa Melayuالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ಬಿರ್' (ಒಳಿತು) ಮತ್ತು 'ಇಸ್ಮ್' (ಪಾಪ) ದ ಬಗ್ಗೆ ವಿವರಿಸುತ್ತಿದ್ದಾರೆ. ಅವರು ಹೇಳಿದರು: 'ಬಿರ್' ನ ಅತ್ಯಂತ ಶ್ರೇಷ್ಠ ಗುಣಲಕ್ಷಣಗಳಲ್ಲಿ ಒಂದು ಉತ್ತಮ ನಡತೆ. ಅಲ್ಲಾಹನೊಂದಿಗೆ ಉತ್ತಮ ನಡತೆ ಎಂದರೆ, ಅಲ್ಲಾಹನನ್ನು ಭಯಪಟ್ಟು ಜೀವಿಸುವುದು, ಮತ್ತು ಸೃಷ್ಟಿಗಳೊಂದಿಗೆ ಉತ್ತಮ ನಡತೆ ಎಂದರೆ, ತೊಂದರೆಯನ್ನು ಸಹಿಸುವುದು, ಕೋಪವನ್ನು ಕಡಿಮೆ ಮಾಡುವುದು, ಮುಖದಲ್ಲಿ ಮುಗುಳ್ನಗೆ ಇರಿಸುವುದು, ಉತ್ತಮ ಮಾತುನಾಡುವುದು, ಸಂಬಂಧ ಬೆಸೆಯುವುದು, ವಿಧೇಯತೆ, ದಯೆ, ಉಪಕಾರ, ಉತ್ತಮ ಸಹವಾಸ ಮತ್ತು ಒಡನಾಟ. 'ಬಿರ್' ಎಂದರೆ ಯಾವುದು ಹೃದಯ ಮತ್ತು ಆತ್ಮಕ್ಕೆ ನೆಮ್ಮದಿ ನೀಡುತ್ತದೆಯೋ ಅದು. 'ಇಸ್ಮ್' (ಪಾಪ) ಎಂದರೆ, ಸಂಶಯಾಸ್ಪದ ವಿಷಯಗಳಲ್ಲಿ ಯಾವುದು ಆತ್ಮದಲ್ಲಿ ಚಲನೆಯನ್ನು ಉಂಟುಮಾಡುತ್ತದೆಯೋ ಮತ್ತು ಹಿಂಜರಿಕೆಯುಂಟಾಗುತ್ತದೆಯೋ ಅದು. ಅದಕ್ಕಾಗಿ ಎದೆಯು ತೆರೆದುಕೊಳ್ಳುವುದಿಲ್ಲ ಮತ್ತು ಹೃದಯದಲ್ಲಿ ಅದರ ಬಗ್ಗೆ ಸಂಶಯ ಹಾಗೂ ಅದು ಪಾಪವಾಗಿರಬಹುದೆಂಬ ಭಯ ಉಂಟಾಗುತ್ತದೆ. ಅದು ಅಸಹ್ಯಕರವಾಗಿರುವುದರಿಂದ ನೀನು ಅದನ್ನು ಜನರ ಮುಂದೆ, ವಿಶೇಷವಾಗಿ ಗಣ್ಯರು, ಶ್ರೇಷ್ಠರು ಮತ್ತು ಪರಿಪೂರ್ಣರಾದವರ ಮುಂದೆ ಪ್ರಕಟಪಡಿಸಲು ಇಷ್ಟಪಡುವುದಿಲ್ಲ. ಏಕೆಂದರೆ, ಆತ್ಮವು ತನ್ನ ಸ್ವಭಾವದಿಂದಲೇ ಜನರು ತನ್ನ ಒಳಿತನ್ನು ಮಾತ್ರ ತಿಳಿದುಕೊಳ್ಳಬೇಕೆಂದು ಆಸೆಪಡುತ್ತದೆ. ಆದ್ದರಿಂದ, ತನ್ನ ಕೆಲವು ಕಾರ್ಯಗಳ ಬಗ್ಗೆ ಜನರು ತಿಳಿದುಕೊಳ್ಳುವುದನ್ನು ನೀನು ಇಷ್ಟಪಡದಿದ್ದರೆ, ಅದು ಪಾಪವಾಗಿದೆ, ಮತ್ತು ಅದರಲ್ಲಿ ಯಾವುದೇ ಒಳಿತಿಲ್ಲ. ಜನರು ನಿನಗೆ (ಅದು ಒಳಿತೆಂದು) ಫತ್ವಾ ನೀಡಿದರೂ ಸಹ. ನಿನ್ನ ಆತ್ಮದಲ್ಲಿ ಸಂಶಯದ ಚಿಹ್ನೆಯು ಹಿಂಜರಿಕೆಯನ್ನುಂಟುಮಾಡುತ್ತಿರುವವರೆಗೆ ನೀನು ಅವರ ಫತ್ವಾವನ್ನು ತೆಗೆದುಕೊಳ್ಳಬೇಡ. ಏಕೆಂದರೆ, ಸಂಶಯವು ಸರಿಯಾಗಿದ್ದರೆ ಮತ್ತು ಫತ್ವಾ ನೀಡುವವನು ಜ್ಞಾನವಿಲ್ಲದೆ ಫತ್ವಾ ನೀಡುತ್ತಿದ್ದರೆ, ಫತ್ವಾವು ಸಂಶಯವನ್ನು ನಿವಾರಿಸುವುದಿಲ್ಲ. ಆದರೆ, ಒಂದು ವೇಳೆ ಫತ್ವಾವು ಶರೀಅತ್ನ ಪುರಾವೆಯ ಮೇಲೆ ಆಧಾರಿತವಾಗಿದ್ದರೆ, ಫತ್ವಾ ಕೇಳುವವನ ಎದೆಯು ಅದಕ್ಕೆ ತೆರೆದುಕೊಳ್ಳದಿದ್ದರೂ ಸಹ, ಅವನು ಅದಕ್ಕೆ ಮರಳುವುದು ಕಡ್ಡಾಯವಾಗಿದೆ.فوائد الحديث
ಉತ್ತಮ ಗುಣನಡತೆಯನ್ನು ಪ್ರೋತ್ಸಾಹಿಸಲಾಗಿದೆ. ಏಕೆಂದರೆ ಉತ್ತಮ ನಡವಳಿಕೆಯು ಪುಣ್ಯದ ಶ್ರೇಷ್ಠ ಗುಣಲಕ್ಷಣಗಳಲ್ಲಿ ಒಂದಾಗಿದೆ.
ಸತ್ಯ ಮತ್ತು ಸುಳ್ಳು ಸತ್ಯವಿಶ್ವಾಸಿಗೆ ಗೊಂದಲವನ್ನುಂಟುಮಾಡುವುದಿಲ್ಲ. ಬದಲಿಗೆ ಅವನು ತನ್ನ ಹೃದಯದಲ್ಲಿರುವ ಬೆಳಕಿನಿಂದ ಸತ್ಯವನ್ನು ಅರಿಯುತ್ತಾನೆ, ಮತ್ತು ಸುಳ್ಳಿನಿಂದ ದೂರವಾಗುತ್ತಾನೆ ಹಾಗೂ ಅದನ್ನು ನಿರಾಕರಿಸುತ್ತಾನೆ.
ಹೃದಯದಲ್ಲಿ ಆತಂಕ ಮತ್ತು ಚಡಪಡಿಕೆ ಉಂಟಾಗುವುದು ಮತ್ತು ಜನರು ಅದನ್ನು ತಿಳಿಯಬಾರದೆಂದು ಬಯಸುವುದು ಪಾಪದ ಚಿಹ್ನೆಗಳಲ್ಲಿ ಒಂದಾಗಿದೆ.
ಸನದಿ ಹೇಳಿದರು: "ಇದು (ಹದೀಸಿನಲ್ಲಿ ಹೇಳಲಾದ ಪಾಪ-ಪುಣ್ಯಗಳು) ಜನರು ನಿರ್ದಿಷ್ಟವಾಗಿ ಸರಿಯೋ ತಪ್ಪೋ ಎಂದು ತಿಳಿದಿರದ ಸಂದೇಹಾತ್ಮಕ ವಿಷಯಗಳ ಬಗ್ಗೆಯಾಗಿದೆ. ಇಲ್ಲದಿದ್ದರೆ, ಶರಿಯತ್ನಲ್ಲಿ ಆದೇಶಿಸಲಾದ ಕಾರ್ಯಗಳು ಮತ್ತು ಅವುಗಳಿಗೆ ವಿರುದ್ಧವಾಗಿ ಯಾವುದೇ ಪುರಾವೆಗಳು ಇಲ್ಲದಿದ್ದರೆ, ಅವೆಲ್ಲವೂ ಪುಣ್ಯವಾಗಿವೆ. ಅದೇ ರೀತಿ ಶರಿಯತ್ ನಿಷೇಧಿಸಿದ ಕಾರ್ಯಗಳು ಪಾಪಗಳಾಗಿವೆ. ಇವುಗಳಿಗೆ ಸಂಬಂಧಿಸಿ ಹೃದಯದೊಡನೆ ವಿಧಿ ಕೇಳಬೇಕಾದ ಅಥವಾ ಸಮಾಧಾನ ಉಂಟಾಗುತ್ತದೋ ಇಲ್ಲವೋ ಎಂದು ನೋಡಬೇಕಾದ ಅಗತ್ಯವಿಲ್ಲ.
ಹದೀಸಿನಲ್ಲಿ ಹೇಳಲಾಗಿರುವುದು ಸ್ವಸ್ಥವಾದ ಸಹಜ ಮನೋಧರ್ಮವನ್ನು ಹೊಂದಿರುವವರ ಬಗ್ಗೆಯಾಗಿದೆಯೇ ವಿನಾ ಸ್ವೇಚ್ಛೆಗೆ ದಾಸರಾಗಿ ತಮ್ಮ ಮನಸ್ಸು ಹೇಳಿದ್ದೇ ಪುಣ್ಯ ಮತ್ತು ತಮ್ಮ ಮನಸ್ಸು ಹೇಳಿದ್ದೇ ಪಾಪ ಎಂದು ನಿರ್ಧರಿಸುವ ಬುಡಮೇಲಾದ ಹೃದಯಗಳಿರುವವರ ಬಗ್ಗೆಯಲ್ಲ."
ತೀಬಿ ಹೇಳಿದರು: "ಹೀಗೆ ಹೇಳಲಾಗುತ್ತದೆ: ಹದೀಸಿನಲ್ಲಿ ಪುಣ್ಯವನ್ನು ವಿವಿಧ ಅರ್ಥಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಕೆಲವು ಸ್ಥಳಗಳಲ್ಲಿ (ಪುಣ್ಯ ಎಂದರೆ) ಮನಸ್ಸು ಮತ್ತು ಹೃದಯವು ಸಮಾಧಾನ ಪಡೆಯುವ ವಿಷಯವೆಂದು ವ್ಯಾಖ್ಯಾನಿಸಲಾಗಿದೆ. ಕೆಲವು ಸ್ಥಳಗಳಲ್ಲಿ ನಂಬಿಕೆಯೆಂದು ವ್ಯಾಖ್ಯಾನಿಸಲಾಗಿದೆ. ಕೆಲವು ಸ್ಥಳದಲ್ಲಿ ಅಲ್ಲಾಹನಿಗೆ ಹತ್ತಿರಗೊಳಿಸುವ ಕಾರ್ಯವೆಂದು ವ್ಯಾಖ್ಯಾನಿಸಲಾಗಿದೆ. ಇಲ್ಲಿ ಅದನ್ನು ಉತ್ತಮ ನಡವಳಿಕೆಯೆಂದು ವ್ಯಾಖ್ಯಾನಿಸಲಾಗಿದೆ. ಉತ್ತಮ ನಡವಳಿಕೆಯನ್ನು ನೋವನ್ನು ಸಹಿಸಿಕೊಳ್ಳುವುದು ಮತ್ತು ಕೋಪ ಕಡಿಮೆ ಮಾಡುವುದು, ಮುಖದಲ್ಲಿ ನಗು ಬೀರುವುದು, ಮಧುರವಾಗಿ ಮಾತನಾಡುವುದು ಎಂದು ವ್ಯಾಖ್ಯಾನಿಸಲಾಗಿದೆ. ಇವೆಲ್ಲವೂ ಹೆಚ್ಚು-ಕಡಿಮೆ ಒಂದು ಅರ್ಥವನ್ನು ಹೊಂದಿವೆ.
