إعدادات العرض
ಖಂಡಿತವಾಗಿಯೂ ಅಲ್ಲಾಹು ಅದರ ಕಾರಣದಿಂದ ಅವಳಿಗೆ ಸ್ವರ್ಗವನ್ನು ಕಡ್ಡಾಯಗೊಳಿಸಿದ್ದಾನೆ. ಅಥವಾ ಅದರ ಕಾರಣದಿಂದ ಅವಳನ್ನು ನರಕದಿಂದ…
ಖಂಡಿತವಾಗಿಯೂ ಅಲ್ಲಾಹು ಅದರ ಕಾರಣದಿಂದ ಅವಳಿಗೆ ಸ್ವರ್ಗವನ್ನು ಕಡ್ಡಾಯಗೊಳಿಸಿದ್ದಾನೆ. ಅಥವಾ ಅದರ ಕಾರಣದಿಂದ ಅವಳನ್ನು ನರಕದಿಂದ ಮುಕ್ತಗೊಳಿಸಿದ್ದಾನೆ
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಬ್ಬ ಬಡ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹೊತ್ತುಕೊಂಡು ನನ್ನ ಬಳಿಗೆ ಬಂದಳು. ನಾನು ಅವಳಿಗೆ ಮೂರು ಖರ್ಜೂರಗಳನ್ನು ತಿನ್ನಲು ಕೊಟ್ಟೆನು. ಅವಳು ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಖರ್ಜೂರವನ್ನು ಕೊಟ್ಟಳು. ಇನ್ನೊಂದು ಖರ್ಜೂರವನ್ನು ತಾನು ತಿನ್ನಲು ತನ್ನ ಬಾಯಿಯ ಕಡೆಗೆ ಎತ್ತಿದಳು. ಆಗ ಅವಳ ಇಬ್ಬರು ಹೆಣ್ಣು ಮಕ್ಕಳು ಅವಳಿಂದ ಆ (ಮೂರನೇ) ಖರ್ಜೂರವನ್ನು ಕೇಳಿದರು. ಆಗ ಅವಳು ತಾನು ತಿನ್ನಬೇಕೆಂದಿದ್ದ ಖರ್ಜೂರವನ್ನು ಎರಡು ಭಾಗ ಮಾಡಿ ಅವರಿಬ್ಬರಿಗೆ ಹಂಚಿದಳು. ಅವಳ ಈ ಕಾರ್ಯವು ನನಗೆ ಬಹಳ ಆಶ್ಚರ್ಯವನ್ನುಂಟುಮಾಡಿತು. ಅವಳು ಮಾಡಿದ್ದನ್ನು ನಾನು ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದೆನು. ಆಗ ಅವರು ಹೇಳಿದರು: "ಖಂಡಿತವಾಗಿಯೂ ಅಲ್ಲಾಹು ಅದರ ಕಾರಣದಿಂದ ಅವಳಿಗೆ ಸ್ವರ್ಗವನ್ನು ಕಡ್ಡಾಯಗೊಳಿಸಿದ್ದಾನೆ. ಅಥವಾ ಅದರ ಕಾರಣದಿಂದ ಅವಳನ್ನು ನರಕದಿಂದ ಮುಕ್ತಗೊಳಿಸಿದ್ದಾನೆ".
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी Tiếng Việt Hausa Kurdî Kiswahili Magyar ქართული සිංහල Română অসমীয়া ไทย Português मराठी ភាសាខ្មែរ دری አማርኛ ગુજરાતી Македонски Nederlands ਪੰਜਾਬੀ മലയാളം తెలుగుالشرح
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಒಬ್ಬ ಬಡ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹೊತ್ತುಕೊಂಡು ಅವರ ಬಳಿ (ಸಹಾಯ) ಕೇಳಿದಳು. ಆಗ ಅವರು ಅವಳಿಗೆ ಮೂರು ಖರ್ಜೂರಗಳನ್ನು ತಿನ್ನಲು ಕೊಟ್ಟರು. ಅವಳು ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಖರ್ಜೂರವನ್ನು ಕೊಟ್ಟಳು. ಇನ್ನೊಂದು ಖರ್ಜೂರವನ್ನು ತಾನು ತಿನ್ನಲು ತನ್ನ ಬಾಯಿಯ ಕಡೆಗೆ ಎತ್ತಿದಳು. ಆಗ ಅವಳ ಇಬ್ಬರು ಹೆಣ್ಣು ಮಕ್ಕಳು ಅವಳು ತಿನ್ನಬೇಕೆಂದಿದ್ದ ಖರ್ಜೂರವನ್ನು ಕೇಳಿದರು. ಆಗ ಅವಳು ಆ ಖರ್ಜೂರವನ್ನು ಎರಡು ತುಂಡು ಮಾಡಿ ಅವರಿಬ್ಬರಿಗೆ ಹಂಚಿದಳು. ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಗೆ ಅವಳ ಈ ಕಾರ್ಯವು ಬಹಳ ಆಶ್ಚರ್ಯವನ್ನುಂಟುಮಾಡಿತು. ಅವರು ಆ ಮಹಿಳೆ ಮಾಡಿದ್ದನ್ನು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಖಂಡಿತವಾಗಿಯೂ ಅಲ್ಲಾಹು ಈ ಖರ್ಜೂರದ ಕಾರಣದಿಂದ ಅವಳಿಗೆ ಸ್ವರ್ಗವನ್ನು ಕಡ್ಡಾಯಗೊಳಿಸಿದ್ದಾನೆ, ಅಥವಾ ಅದರ ಕಾರಣದಿಂದ ಅವಳನ್ನು ನರಕದಿಂದ ಮುಕ್ತಗೊಳಿಸಿದ್ದಾನೆ.فوائد الحديث
ದಾನವು ಸ್ವಲ್ಪವೇ ಆಗಿದ್ದರೂ ಅದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಇದು ಸತ್ಯವಿಶ್ವಾಸಿಯು ತನ್ನ ಪರಿಪಾಲಕನ (ಅಲ್ಲಾಹನ) ಮೇಲಿಟ್ಟಿರುವ ವಿಶ್ವಾಸ, ಅವನ ವಾಗ್ದಾನ ಮತ್ತು ಅನುಗ್ರಹದಲ್ಲಿರುವ ನಂಬಿಕೆಯ ಸತ್ಯತೆಯನ್ನು ಸೂಚಿಸುತ್ತದೆ.
ತಾಯಂದಿರಿಗೆ ಮಕ್ಕಳ ಮೇಲಿರುವ ಅತಿಯಾದ ಕರುಣೆ ಮತ್ತು ಅವರು ಕಷ್ಟಕ್ಕೊಳಗಾಗಬಹುದೆಂಬ ಭಯವನ್ನು ತಿಳಿಸಲಾಗಿದೆ.
ತನಗಿಂತ ಇತರರಿಗೆ ಆದ್ಯತೆ ನೀಡುವುದರ, ಚಿಕ್ಕ ಮಕ್ಕಳ ಮೇಲೆ ಕರುಣೆ ತೋರುವುದರ, ಮತ್ತು ಹೆಣ್ಣು ಮಕ್ಕಳೊಂದಿಗೆ ಹೆಚ್ಚಿನ ಉಪಕಾರ ಮತ್ತು ಮೃದುತ್ವದಿಂದ ವರ್ತಿಸುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಇವು ಸ್ವರ್ಗ ಪ್ರವೇಶಿಸುವ ಮತ್ತು ನರಕದಿಂದ ಮುಕ್ತಿ ಹೊಂದುವ ಕಾರಣಗಳಾಗಿವೆ.
ಸಣ್ಣ ಪ್ರಮಾಣವು ಅದು ತುಚ್ಛವಾಗಿದೆಯೆಂಬ ಕಾರಣದಿಂದ ದಾನ ಮಾಡದಂತೆ ತಡೆಯಬಾರದು. ಬದಲಿಗೆ, ದಾನ ಮಾಡುವವನು ತನಗೆ ಸಾಧ್ಯವಾದಷ್ಟನ್ನು, ಅದು ಕಡಿಮೆಯಿರಲಿ ಅಥವಾ ಹೆಚ್ಚಿರಲಿ, ದಾನ ಮಾಡಬೇಕು.
ಇದರಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಗಳ ಸ್ಥಿತಿ, ಮತ್ತು ಅವರ ಹಾಗೂ ಅವರ ಕುಟುಂಬದ ಜೀವನ ಹೇಗಿತ್ತು ಎಂಬುದು ತಿಳಿದುಬರುತ್ತದೆ – ಅವರ ಮನೆಯಲ್ಲಿ ಒಂದು ಅಥವಾ ಮೂರು ಖರ್ಜೂರಗಳನ್ನು ಹೊರತುಪಡಿಸಿ ತಿನ್ನಲು ಬೇರೇನೂ ಇರಲಿಲ್ಲ.
التصنيفات
Merits of Good Deeds