إعدادات العرض
ಅಲ್ಲಾಹನ ಮಾರ್ಗದಲ್ಲಿ ಒಂದು ದಿನ 'ರಿಬಾತ್' ಮಾಡುವುದು (ಗಡಿಯಲ್ಲಿ ಕಾವಲು ಕಾಯುವುದು) ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ…
ಅಲ್ಲಾಹನ ಮಾರ್ಗದಲ್ಲಿ ಒಂದು ದಿನ 'ರಿಬಾತ್' ಮಾಡುವುದು (ಗಡಿಯಲ್ಲಿ ಕಾವಲು ಕಾಯುವುದು) ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ
ಸಹ್ಲ್ ಬಿನ್ ಸಅದ್ ಸಾಇದೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ಒಂದು ದಿನ 'ರಿಬಾತ್' ಮಾಡುವುದು (ಗಡಿಯಲ್ಲಿ ಕಾವಲು ಕಾಯುವುದು) ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ. ಸ್ವರ್ಗದಲ್ಲಿ ನಿಮ್ಮಲ್ಲೊಬ್ಬನಿಗೆ ದೊರೆಯುವ ಚಾಟಿಯಷ್ಟು (ಅಥವಾ ಚಾಟಿ ಇಡುವಷ್ಟು) ಸ್ಥಳವು ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ. ಅಲ್ಲಾಹನ ಮಾರ್ಗದಲ್ಲಿ ದಾಸನು ಮಾಡುವ ಒಂದು ಸಂಜೆಯ ನಡೆಯುವಿಕೆ (ರೌಹ) ಅಥವಾ ಒಂದು ಮುಂಜಾನೆಯ ನಡೆಯುವಿಕೆ (ಗದ್ವಾ) ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ".
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी Hausa Português മലയാളം Kurdî Tiếng Việt Nederlands Kiswahili অসমীয়া ગુજરાતી සිංහල Magyar ქართული Română ไทย मराठी ភាសាខ្មែរ دری አማርኛ తెలుగు Македонски Українська ਪੰਜਾਬੀ Moore پښتوالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಮುಸ್ಲಿಮರು ಮತ್ತು ಸತ್ಯನಿಷೇಧಿಗಳ ನಡುವಿನ ಸ್ಥಳದಲ್ಲಿ, ಮುಸ್ಲಿಮರನ್ನು ಅವರಿಂದ ರಕ್ಷಿಸಲು, ಅಲ್ಲಾಹನಿಗಾಗಿ ನಿಷ್ಕಳಂಕತೆಯೊಂದಿಗೆ ಒಂದು ದಿನದ ಮಟ್ಟಿಗೆ ಕಾವಲು ಕಾಯುವುದು, ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ. ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡಲು ಬಳಸುವ ಚಾಟಿಯಷ್ಟು ಸ್ಥಳವು ಸ್ವರ್ಗದಲ್ಲಿ ದೊರೆಯುವುದು, ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ. ಅಲ್ಲಾಹನ ಮಾರ್ಗದಲ್ಲಿ ದಿನದ ಆರಂಭದಿಂದ ಝುಹ್ರ್ ಸಮಯದ ಆರಂಭದವರೆಗಿನ (ಗದ್ವಾ) ಅಥವಾ ಝುಹ್ರ್ ಸಮಯದಿಂದ ರಾತ್ರಿಯವರೆಗಿನ (ರೌಹ) ಸಮಯದಲ್ಲಿ ಒಮ್ಮೆ ನಡೆಯುವುದರ ಪ್ರತಿಫಲ ಮತ್ತು ಪುಣ್ಯವು, ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ.فوائد الحديث
ಅಲ್ಲಾಹನ ಮಾರ್ಗದಲ್ಲಿ 'ರಿಬಾತ್' ಮಾಡುವುದರ (ಗಡಿಯಲ್ಲಿ ಕಾವಲು ಕಾಯುವುದರ) ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಏಕೆಂದರೆ ಅದರಲ್ಲಿ ಪ್ರಾಣಕ್ಕೆ ಅಪಾಯವಿದೆ, ಮತ್ತು ಅದರಿಂದ ಅಲ್ಲಾಹನ ವಚನವನ್ನು ಎತ್ತಿಹಿಡಿಯುವುದು ಮತ್ತು ಅವನ ಧರ್ಮಕ್ಕೆ ಸಹಾಯ ಮಾಡುವುದು ಸಾಧ್ಯವಾಗುತ್ತದೆ. ಆದ್ದರಿಂದ, ಅದಕ್ಕಿರುವ ಒಂದು ದಿನದ ಪ್ರತಿಫಲವು ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ.
ಪರಲೋಕಕ್ಕೆ ಹೋಲಿಸಿದರೆ ಈ ಪ್ರಪಂಚವು ತುಚ್ಛವೆಂದು ತಿಳಿಸಲಾಗಿದೆ. ಏಕೆಂದರೆ ಸ್ವರ್ಗದಲ್ಲಿನ ಚಾಟಿಯಷ್ಟು ಸ್ಥಳವು ಈ ಪ್ರಪಂಚ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ.
ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದರ ಶ್ರೇಷ್ಠತೆ, ಮತ್ತು ಅದರ ಮಹತ್ತರವಾದ ಪ್ರತಿಫಲವನ್ನು ತಿಳಿಸಲಾಗಿದೆ. ಏಕೆಂದರೆ ಒಂದು ಸಂಜೆಯ ಅಥವಾ ಒಂದು ಮುಂಜಾನೆಯ ಪ್ರಯಾಣದ ಪ್ರತಿಫಲವು ಈ ಪ್ರಪಂಚ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ.
ಪ್ರವಾದಿಯವರ ಮಾತು: "ಫೀ ಸಬೀಲಿಲ್ಲಾಹ್" (ಅಲ್ಲಾಹನ ಮಾರ್ಗದಲ್ಲಿ) ಎಂಬುದು ಇಖ್ಲಾಸ್ನ (ನಿಷ್ಕಳಂಕತೆ) ಪ್ರಾಮುಖ್ಯತೆಯನ್ನು ಸೂಚಿಸುತ್ತದೆ, ಮತ್ತು ಪ್ರತಿಫಲವು ಅದರ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸುತ್ತದೆ.
