إعدادات العرض
ಖಂಡಿತವಾಗಿಯೂ ಸ್ವರ್ಗದಲ್ಲಿ 'ರಯ್ಯಾನ್' ಎಂಬ ಒಂದು ಬಾಗಿಲಿದೆ. ಉಪವಾಸ ಆಚರಿಸಿದವರು ಪುನರುತ್ಥಾನ ದಿನದಂದು ಅದರ ಮೂಲಕ…
ಖಂಡಿತವಾಗಿಯೂ ಸ್ವರ್ಗದಲ್ಲಿ 'ರಯ್ಯಾನ್' ಎಂಬ ಒಂದು ಬಾಗಿಲಿದೆ. ಉಪವಾಸ ಆಚರಿಸಿದವರು ಪುನರುತ್ಥಾನ ದಿನದಂದು ಅದರ ಮೂಲಕ ಪ್ರವೇಶಿಸುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ
ಸಹ್ಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಸ್ವರ್ಗದಲ್ಲಿ 'ರಯ್ಯಾನ್' ಎಂಬ ಒಂದು ಬಾಗಿಲಿದೆ. ಉಪವಾಸ ಆಚರಿಸಿದವರು ಪುನರುತ್ಥಾನ ದಿನದಂದು ಅದರ ಮೂಲಕ ಪ್ರವೇಶಿಸುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. (ಆ ದಿನ) 'ಉಪವಾಸಿಗರು ಎಲ್ಲಿ?' ಎಂದು ಕರೆಯಲಾಗುವುದು. ಆಗ ಅವರು ಎದ್ದು ನಿಲ್ಲುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. ಅವರೆಲ್ಲರೂ ಪ್ರವೇಶಿಸಿದ ನಂತರ ಅದನ್ನು ಮುಚ್ಚಲಾಗುವುದು. ನಂತರ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ".
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी ئۇيغۇرچە Hausa Kurdî Tiếng Việt Nederlands Kiswahili অসমীয়া ગુજરાતી සිංහල Magyar ქართული Română ไทย Português मराठी ភាសាខ្មែរ دری አማርኛ Македонски తెలుగు Українська ਪੰਜਾਬੀ മലയാളം Moore پښتوالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸ್ವರ್ಗದ ಬಾಗಿಲುಗಳಲ್ಲಿ ಒಂದು ಬಾಗಿಲನ್ನು 'ಬಾಬು ರ್ರಯ್ಯಾನ್' ಎಂದು ಕರೆಯಲಾಗುತ್ತದೆ. ಉಪವಾಸ ಆಚರಿಸಿದವರು ಪುನರುತ್ಥಾನ ದಿನದಂದು ಅದರ ಮೂಲಕ ಪ್ರವೇಶಿಸುವರು, ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. 'ಉಪವಾಸಿಗರು ಎಲ್ಲಿ?' ಎಂದು ಕರೆಯಲಾಗುವುದು. ಆಗ ಅವರು ಎದ್ದು ನಿಂತು ಪ್ರವೇಶಿಸುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. ಅವರಲ್ಲಿ ಕೊನೆಯವರು ಪ್ರವೇಶಿಸಿದ ನಂತರ ಅದನ್ನು ಮುಚ್ಚಲಾಗುವುದು. ನಂತರ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ.فوائد الحديث
ಇಮಾಮ್ ನವವಿ ಹೇಳುತ್ತಾರೆ: "ಈ ಹದೀಸ್ನಲ್ಲಿ ಉಪವಾಸದ ಶ್ರೇಷ್ಠತೆಯನ್ನು ಮತ್ತು ಉಪವಾಸಿಗರ ಗೌರವವನ್ನು ತಿಳಿಸಲಾಗಿದೆ."
ಅಲ್ಲಾಹು ಉಪವಾಸಿಗರಿಗಾಗಿ ಸ್ವರ್ಗದ ಎಂಟು ಬಾಗಿಲುಗಳಲ್ಲಿ ಒಂದು ಬಾಗಿಲನ್ನು ವಿಶೇಷವಾಗಿ ಮೀಸಲಿಟ್ಟಿದ್ದಾನೆ. ಅವರು ಪ್ರವೇಶಿಸಿದ ನಂತರ ಅದನ್ನು ಮುಚ್ಚಲಾಗುತ್ತದೆ.
ಸ್ವರ್ಗಕ್ಕೆ ಬಾಗಿಲುಗಳಿವೆ ಎಂದು ವಿವರಿಸಲಾಗಿದೆ.
ಸಿಂದಿ ಹೇಳುತ್ತಾರೆ: "ಅವರ ಮಾತು: 'ಉಪವಾಸಿಗರು ಎಲ್ಲಿ?'. ಇದರ ಉದ್ದೇಶ ಬಹುಶಃ ಉಪವಾಸವನ್ನು ಹೆಚ್ಚಾಗಿ ಆಚರಿಸುವವರು ಆಗಿರಬಹುದು. ಹೇಗೆ 'ಆದಿಲ್' (ನ್ಯಾಯವಂತ) ಅಥವಾ 'ಝಾಲಿಮ್' (ಅನ್ಯಾಯಗಾರ) ಎಂದು ಆ ಗುಣವನ್ನು ರೂಢಿ ಮಾಡಿಕೊಂಡವರಿಗೆ ಹೇಳಲಾಗುತ್ತದೆಯೋ ಹಾಗೆ. ಒಮ್ಮೆ ಮಾತ್ರ ಮಾಡಿದವರಿಗೆ ಇದು ಅನ್ವಯಿಸುವುದಿಲ್ಲ."
'ಅರ್-ರಯ್ಯಾನ್' ಅಂದರೆ ದಾಹವನ್ನು ನೀಗಿಸುವವನು. ಏಕೆಂದರೆ ಉಪವಾಸಿಗರು ದಾಹವನ್ನು ಅನುಭವಿಸುತ್ತಾರೆ. ವಿಶೇಷವಾಗಿ ಬೇಸಿಗೆಯ ದೀರ್ಘ, ಬಿಸಿ ದಿನಗಳಲ್ಲಿ. ಆದ್ದರಿಂದ ಅವರಿಗೆ ವಿಶೇಷವಾಗಿರುವ ಹೆಸರನ್ನು (ಬಾಬು ರ್ರಯ್ಯಾನ್) ಈ ಬಾಗಿಲಿಗೆ ನೀಡುವ ಮೂಲಕ ಅವರಿಗೆ ಪ್ರತಿಫಲ ನೀಡಲಾಗುತ್ತದೆ. 'ರಯ್ಯಾನ್' ಎಂದರೆ ಅತ್ಯಧಿಕ 'ರಯ್' (ದಾಹ ನೀಗುವುದು) ದಿಂದ ಬಂದಿದ್ದು, 'ಅತಶ್' (ದಾಹ) ದ ವಿರುದ್ಧ ಪದವಾಗಿದೆ ಎಂದೂ ಹೇಳಲಾಗಿದೆ. ಉಪವಾಸಿಗಳ ದಾಹ ಮತ್ತು ಹಸಿವಿಗೆ ಪ್ರತಿಫಲವಾಗಿ ಅದಕ್ಕೆ ಈ ಹೆಸರಿಡಲಾಗಿದೆ.
التصنيفات
Virtue of Fasting