إعدادات العرض
ಅಲ್ಲಾಹು ನನ್ನನ್ನು ಕಳುಹಿಸಿರುವ ಮಾರ್ಗದರ್ಶನ ಮತ್ತು ಜ್ಞಾನದ ಉದಾಹರಣೆಯು, ಒಂದು ಭೂಮಿಯ ಮೇಲೆ ಬಿದ್ದ ಭಾರೀ ಮಳೆಯಂತಿದೆ
ಅಲ್ಲಾಹು ನನ್ನನ್ನು ಕಳುಹಿಸಿರುವ ಮಾರ್ಗದರ್ಶನ ಮತ್ತು ಜ್ಞಾನದ ಉದಾಹರಣೆಯು, ಒಂದು ಭೂಮಿಯ ಮೇಲೆ ಬಿದ್ದ ಭಾರೀ ಮಳೆಯಂತಿದೆ
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ನನ್ನನ್ನು ಕಳುಹಿಸಿರುವ ಮಾರ್ಗದರ್ಶನ ಮತ್ತು ಜ್ಞಾನದ ಉದಾಹರಣೆಯು, ಒಂದು ಭೂಮಿಯ ಮೇಲೆ ಬಿದ್ದ ಭಾರೀ ಮಳೆಯಂತಿದೆ. ಅದರಲ್ಲಿ ಒಂದು ಭಾಗವು ಫಲವತ್ತಾದ ಭೂಮಿಯಾಗಿತ್ತು, ಅದು ನೀರನ್ನು ಸ್ವೀಕರಿಸಿ, ಹುಲ್ಲು ಮತ್ತು ಹೇರಳವಾದ ಸಸ್ಯಗಳನ್ನು ಬೆಳೆಸಿತು. ಮತ್ತು ಅದರಲ್ಲಿ ಇನ್ನೊಂದು ಭಾಗವು ಬಂಜರು ಭೂಮಿಯಾಗಿತ್ತು, ಅದು ನೀರನ್ನು ಹಿಡಿದಿಟ್ಟುಕೊಂಡಿತು. ಆಗ ಅಲ್ಲಾಹು ಅದರ ಮೂಲಕ ಜನರಿಗೆ ಪ್ರಯೋಜನ ನೀಡಿದನು; ಅವರು ಅದರಿಂದ ಕುಡಿದರು, (ತಮ್ಮ ಪ್ರಾಣಿಗಳಿಗೆ) ಕುಡಿಸಿದರು ಮತ್ತು (ತಮ್ಮ ಹೊಲಗಳಿಗೆ) ನೀರು ಹಾಯಿಸಿದರು. ಮತ್ತು ಅದು (ಮಳೆ) ಇನ್ನೊಂದು ಭಾಗಕ್ಕೂ ಬಿದ್ದಿತು, ಅದು ಕೇವಲ ಬಯಲು ನೆಲವಾಗಿತ್ತು. ಅದು ನೀರನ್ನೂ ಹಿಡಿದಿಟ್ಟುಕೊಳ್ಳುವುದಿಲ್ಲ, ಸಸ್ಯವನ್ನೂ ಬೆಳೆಸುವುದಿಲ್ಲ. ಇದು, ಯಾರು ಅಲ್ಲಾಹನ ಧರ್ಮದಲ್ಲಿ ಜ್ಞಾನ (ಫಿಕ್ಹ್) ವನ್ನು ಪಡೆದು, ಅಲ್ಲಾಹು ನನ್ನನ್ನು ಕಳುಹಿಸಿರುವ ವಿಷಯದಿಂದ ಪ್ರಯೋಜನ ಪಡೆದು, ತಾನೂ ಕಲಿತು ಇತರರಿಗೂ ಕಲಿಸಿದನೋ ಅವನ ಉದಾಹರಣೆಯಾಗಿದೆ, ಮತ್ತು ಯಾರು ಅದನ್ನು ತಲೆ ಎತ್ತಿ ನೋಡಲಿಲ್ಲವೋ, ಮತ್ತು ನಾನು ಯಾವುದರೊಂದಿಗೆ ಕಳುಹಿಸಲ್ಪಟ್ಟೆನೋ ಆ ಅಲ್ಲಾಹನ ಮಾರ್ಗದರ್ಶನವನ್ನು ಸ್ವೀಕರಿಸಲಿಲ್ಲವೋ ಅವನ ಉದಾಹರಣೆಯಾಗಿದೆ."
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी Hausa Kurdî Tiếng Việt Magyar ქართული Kiswahili සිංහල Română অসমীয়া ไทย Português मराठी دری አማርኛ ភាសាខ្មែរ ગુજરાતી Nederlands Македонски ਪੰਜਾਬੀ മലയാളംالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಾವು ತಂದಿರುವ, ಗುರಿಯನ್ನು ತಲುಪಿಸುವ ದಾರಿಯಾದ ಮಾರ್ಗದರ್ಶನ ಮತ್ತು ಶರೀಅತ್ನ (ಧಾರ್ಮಿಕ) ಜ್ಞಾನದಿಂದ ಪ್ರಯೋಜನ ಪಡೆಯುವವರನ್ನು, ಭಾರೀ ಮಳೆ ಬೀಳುವ ಭೂಮಿಗೆ ಆಶ್ಚರ್ಯಸೂಚಕವಾಗಿ ಹೋಲಿಸಿದರು. ಅದು ಮೂರು ಪ್ರದೇಶಗಳನ್ನು ಹೊಂದಿತ್ತು: ಒಂದು: ಶುದ್ಧ, ಉತ್ತಮ ಭೂಮಿ. ಅದು ಮಳೆನೀರನ್ನು ಸ್ವೀಕರಿಸಿ, ಹಸಿ ಮತ್ತು ಒಣಗಿದ ಹೇರಳವಾದ ಸಸ್ಯಗಳನ್ನು ಬೆಳೆಸುತ್ತದೆ. ಆಗ ಜನರು ಅದರಿಂದ ಪ್ರಯೋಜನ ಪಡೆಯುತ್ತಾರೆ. ಎರಡು: ನೀರನ್ನು ಹಿಡಿದಿಟ್ಟುಕೊಳ್ಳುವ ಭೂಮಿ. ಆದರೆ ಅದು ಬೆಳೆಯನ್ನು ಬೆಳೆಸುವುದಿಲ್ಲ. ಅದು ಜನರು ಪ್ರಯೋಜನ ಪಡೆಯಲೆಂದು ನೀರನ್ನು ಸಂಗ್ರಹಿಸಿಡುತ್ತದೆ. ಆಗ ಅವರು ಕುಡಿಯುತ್ತಾರೆ, ತಮ್ಮ ಜಾನುವಾರುಗಳಿಗೆ ಮತ್ತು ಹೊಲಗಳಿಗೆ ನೀರುಣಿಸುತ್ತಾರೆ. ಮೂರು: ನುಣುಪಾದ, ಸಮತಟ್ಟಾದ ಭೂಮಿ, ಅದು ನೀರನ್ನೂ ಹಿಡಿದಿಟ್ಟುಕೊಳ್ಳುವುದಿಲ್ಲ, ಸಸ್ಯವನ್ನೂ ಬೆಳೆಸುವುದಿಲ್ಲ. ಅದು ಆ ನೀರಿನಿಂದ ತಾನೂ ಪ್ರಯೋಜನ ಪಡೆಯಲಿಲ್ಲ, ಮತ್ತು ಜನರೂ ಅದರಿಂದ ಪ್ರಯೋಜನ ಪಡೆಯಲಿಲ್ಲ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೂಲಕ ಕಳುಹಿಸಲಾದ ಜ್ಞಾನ ಮತ್ತು ಮಾರ್ಗದರ್ಶನವನ್ನು ಕೇಳುವವರೂ (ಮೂರು ವಿಧಗಳಾಗಿದ್ದಾರೆ): ಒಂದು: ಅಲ್ಲಾಹನ ಧರ್ಮದಲ್ಲಿ ಜ್ಞಾನ ಪಡೆದು, ತನ್ನ ಜ್ಞಾನದಂತೆ ಕಾರ್ಯನಿರ್ವಹಿಸಿ, ಇತರರಿಗೆ ಕಲಿಸುವ ವಿದ್ವಾಂಸ. ಅವನು ಉತ್ತಮ ಭೂಮಿಯ ಸ್ಥಾನದಲ್ಲಿದ್ದಾನೆ. ಅದು ನೀರನ್ನು ಕುಡಿದು ತನಗೂ ಪ್ರಯೋಜನ ಪಡೆದು, ಸಸ್ಯಗಳನ್ನು ಬೆಳೆಸಿ ಇತರರಿಗೂ ಪ್ರಯೋಜನ ನೀಡಿತು. ಎರಡು: ಜ್ಞಾನವನ್ನು ಕಂಠಪಾಠ ಮಾಡಿದವನು. ಆದರೆ ಅವನಿಗೆ (ಆಳವಾದ) ತಿಳುವಳಿಕೆ ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಅವನು ಜ್ಞಾನವನ್ನು ಸಂಗ್ರಹಿಸುವವನು, ಅದಕ್ಕಾಗಿ ತನ್ನ ಸಮಯವನ್ನು ವಿನಿಯೋಗಿಸುವವನು. ಆದರೆ ಅವನು ಐಚ್ಛಿಕ (ನವಾಫಿಲ್) ಕರ್ಮಗಳನ್ನು ಮಾಡುವುದಿಲ್ಲ, ಅಥವಾ ತಾನು ಸಂಗ್ರಹಿಸಿದ್ದನ್ನು (ಆಳವಾಗಿ) ಅರ್ಥಮಾಡಿಕೊಳ್ಳುವುದಿಲ್ಲ. ಅವನು ಇತರರಿಗೆ ಒಂದು ಸಾಧನವಾಗುತ್ತಾನೆ. ಅವನು ನೀರು ನಿಂತು ಜನರು ಅದರಿಂದ ಪ್ರಯೋಜನ ಪಡೆಯುವ ಭೂಮಿಯ ಸ್ಥಾನದಲ್ಲಿದ್ದಾನೆ. ಮೂರು: ಜ್ಞಾನವನ್ನು ಕೇಳಿ ಅದನ್ನು ಕಂಠಪಾಠ ಮಾಡದೆ, ಅದರಂತೆ ಕಾರ್ಯನಿರ್ವಹಿಸದೆ, ಮತ್ತು ಅದನ್ನು ಇತರರಿಗೆ ತಲುಪಿಸದವನು; ಅವನು ಜೌಗು ಅಥವಾ ನುಣುಪಾದ ಭೂಮಿಯ ಸ್ಥಾನದಲ್ಲಿದ್ದಾನೆ. ಅದರಲ್ಲಿ ಸಸ್ಯಗಳಿರುವುದಿಲ್ಲ ಮತ್ತು ಅದು ನೀರನ್ನು ಸ್ವೀಕರಿಸುವುದಿಲ್ಲ ಅಥವಾ ಇತರರಿಗಾಗಿ ಅದನ್ನು ಕೆಡಿಸಿಬಿಡುತ್ತದೆ.فوائد الحديث
ಜ್ಞಾನವನ್ನು ಕಲಿಯುವುದು ಮತ್ತು ಕಲಿಸುವುದರ ಶ್ರೇಷ್ಠತೆಯನ್ನು ವಿವರಿಸಲಾಗಿದೆ, ಮತ್ತು ಅವೆರಡರಿಂದ ವಿಮುಖರಾಗುವುದರ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಜನರಿಗೆ ಅರ್ಥಗಳನ್ನು ಹತ್ತಿರ ತರಲು ಉದಾಹರಣೆಗಳನ್ನು ನೀಡಲಾಗಿದೆ.
ಇಮಾಮ್ ಖುರ್ತುಬಿ ಹೇಳುತ್ತಾರೆ: "ಹೇಗೆ ಮಳೆಯು ಸತ್ತ ಭೂಮಿಯನ್ನು ಪುನರುಜ್ಜೀವನಗೊಳಿಸುತ್ತದೆಯೋ, ಹಾಗೆಯೇ ಧಾರ್ಮಿಕ ಜ್ಞಾನಗಳು ಸತ್ತ ಹೃದಯವನ್ನು ಪುನರುಜ್ಜೀವನಗೊಳಿಸುತ್ತವೆ. ನಂತರ ಅವರು (ಪ್ರವಾದಿ) ತಮಗೆ ಕಿವಿಗೊಡುವವರನ್ನು ಮಳೆ ಬೀಳುವ ವಿವಿಧ ರೀತಿಯ ಭೂಮಿಗಳಿಗೆ ಹೋಲಿಸಿದ್ದಾರೆ."
ಶರೀಅತ್ನ (ಧಾರ್ಮಿಕ) ಜ್ಞಾನವನ್ನು ಸ್ವೀಕರಿಸುವಲ್ಲಿ ಜನರು ವಿವಿಧ ದರ್ಜೆಗಳಲ್ಲಿರುತ್ತಾರೆ.
التصنيفات
Excellence of Knowledge