إعدادات العرض
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಹೇಳಿದರು: "ನನ್ನ ಮುಂದೆ ಪಠಿಸಿರಿ
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಹೇಳಿದರು: "ನನ್ನ ಮುಂದೆ ಪಠಿಸಿರಿ
ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಹೇಳಿದರು: "ನನ್ನ ಮುಂದೆ ಪಠಿಸಿರಿ". ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ, ನಾನು ನಿಮ್ಮ ಮುಂದೆ ಪಠಿಸುವುದೇ? ಅದು (ಕುರ್ಆನ್) ಅವತೀರ್ಣವಾಗಿರುವುದು ನಿಮಗಲ್ಲವೇ?". ಅವರು ಹೇಳಿದರು: "ಹೌದು (ನಾನು ಬೇರೆಯವರಿಂದ ಅದನ್ನು ಕೇಳಲು ಇಷ್ಟಪಡುತ್ತೇನೆ)". ಆಗ ನಾನು ಸೂರ ಅನ್ನಿಸಾ ಪಠಿಸಿದೆ. ಕೊನೆಗೆ ನಾನು ಈ ವಚನಕ್ಕೆ ತಲುಪಿದೆ: “ನಾವು ಪ್ರತಿಯೊಂದು ಸಮುದಾಯದಿಂದ ಒಬ್ಬ ಸಾಕ್ಷಿಯನ್ನು ಕರೆತಂದಾಗ, ಮತ್ತು ಇವರ ಮೇಲೆ ಸಾಕ್ಷಿಯಾಗಿ ನಿಮ್ಮನ್ನು ಕರೆತಂದಾಗ (ಪರಿಸ್ಥಿತಿ) ಹೇಗಿರಬಹುದು?} [ಸೂರಃಅನ್ನಿಸಾ: 41]. ಆಗ ಅವರು ಹೇಳಿದರು: "ಈಗ ಸಾಕು (ನಿಲ್ಲಿಸು)". ನಾನು ಅವರ ಕಡೆಗೆ ತಿರುಗಿದೆನು, ಆಗ ಅವರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿತ್ತು.
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी Tiếng Việt Hausa Kurdî دری Português Македонски Magyar ქართული ไทย অসমীয়া Nederlands ਪੰਜਾਬੀ Kiswahili ગુજરાતી ភាសាខ្មែរ සිංහල मराठी മലയാളംالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಲ್ಲಿ ಕುರ್ಆನ್ನಿಂದ ಏನನ್ನಾದರೂ ಪಠಿಸಲು ಕೇಳಿದರು. ಆಗ ಅವರು ಹೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ನಾನು ನಿಮ್ಮ ಮುಂದೆ ಹೇಗೆ ಪಠಿಸಲಿ, ಅದು ನಿಮಗೆ ಅವತೀರ್ಣವಾದುದಲ್ಲವೇ?! ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಾನು ಅದನ್ನು ಬೇರೆಯವರಿಂದ ಕೇಳಲು ಇಷ್ಟಪಡುತ್ತೇನೆ. ಆಗ ಅವರು ಸೂರ ಅನ್ನಿಸಾ ಪಠಿಸಿದರು. ಅವರು ಸರ್ವೋನ್ನತನಾದ ಅಲ್ಲಾಹನ ಈ ವಚನಕ್ಕೆ ತಲುಪಿದಾಗ: “ನಾವು ಪ್ರತಿಯೊಂದು ಸಮುದಾಯದಿಂದ ಒಬ್ಬ ಸಾಕ್ಷಿಯನ್ನು ಕರೆತಂದಾಗ, ಮತ್ತು ಇವರ ಮೇಲೆ ಸಾಕ್ಷಿಯಾಗಿ ನಿಮ್ಮನ್ನು ಕರೆತಂದಾಗ (ಪರಿಸ್ಥಿತಿ) ಹೇಗಿರಬಹುದು?” ಅಂದರೆ, ನೀವು ನಿಮ್ಮ ಸಮುದಾಯಕ್ಕೆ ನಿಮ್ಮ ಪರಿಪಾಲಕನ ಸಂದೇಶವನ್ನು ತಲುಪಿಸಿದ್ದೀರಿ ಎಂಬುದಕ್ಕೆ ಸಾಕ್ಷಿಯಾಗಿ ನಾವು ನಿಮ್ಮನ್ನು ಕರೆತಂದಾಗ, ನಿಮ್ಮ ಮತ್ತು ನಿಮ್ಮ ಸಮುದಾಯದ ಪರಿಸ್ಥಿತಿ ಹೇಗಿರಬಹುದು? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಈಗ ಪಠಣವನ್ನು ನಿಲ್ಲಿಸು. ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ನಾನು ಅವರ ಕಡೆಗೆ ತಿರುಗಿದೆನು. ಆಗ ಆ ಸನ್ನಿವೇಶದ (ಮಹ್ಶರ್ನ) ಭಯದಿಂದ ಮತ್ತು ತಮ್ಮ ಸಮುದಾಯದ ಮೇಲಿನ ಕರುಣೆಯಿಂದ ಅವರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿತ್ತು.فوائد الحديث
ಇಮಾಮ್ ನವವಿ ಹೇಳುತ್ತಾರೆ: ಕುರ್ಆನ್ ಪಠಣವನ್ನು ಆಲಿಸುವುದು, ಅದಕ್ಕೆ ಕಿವಿಗೊಡುವುದು, (ಕೇಳುವಾಗ) ಅಳುವುದು ಮತ್ತು ಅದರ ಬಗ್ಗೆ ಚಿಂತನೆಗೈಯುವುದು ಅಪೇಕ್ಷಿತವಾಗಿದೆ. ತಾನು ಕೇಳಿಸಿಕೊಳ್ಳಲು ಬೇರೆಯವರಲ್ಲಿ ಪಠಿಸಲು ವಿನಂತಿಸುವುದು ಅಪೇಕ್ಷಿತವಾಗಿದೆ. ಏಕೆಂದರೆ, ತಾನೇ ಓದುವುದಕ್ಕಿಂತ (ಬೇರೆಯವರಿಂದ) ಕೇಳುವುದು ಅರ್ಥಮಾಡಿಕೊಳ್ಳಲು ಮತ್ತು ಚಿಂತನೆ ನಡೆಸಲು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಕುರ್ಆನ್ ಪಠಿಸುವುದರಲ್ಲಿ ಇರುವಂತೆಯೇ ಅದನ್ನು ಕೇಳುವುದರಲ್ಲೂ ಪ್ರತಿಫಲವಿದೆ.
ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆಯನ್ನು ವಿವರಿಸಲಾಗಿದೆ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಬಾಯಿಯಿಂದ ಕೇಳಲು ಇಷ್ಟಪಟ್ಟರು. ಇದು ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಗೆ ಕುರ್ಆನ್ ಕಲಿಯಲು, ಕಂಠಪಾಠ ಮಾಡಲು ಮತ್ತು ಅದರಲ್ಲಿ ಪ್ರಾವೀಣ್ಯತೆ ಪಡೆಯಲು ಇದ್ದ ಆಸಕ್ತಿಯನ್ನು ಸೂಚಿಸುತ್ತದೆ.
ಅಲ್ಲಾಹನ ವಚನಗಳನ್ನು ಕೇಳುವಾಗ ಸರ್ವಶಕ್ತನಾದ ಅಲ್ಲಾಹನ ಭಯದಿಂದ ಅಳುವುದರ ಶ್ರೇಷ್ಠತೆಯನ್ನು ವಿವರಿಸಲಾಗಿದೆ. ಹಾಗೆ ಮಾಡುವಾಗ ಶಾಂತವಾಗಿರುವುದು, ಮೌನವನ್ನು ಪಾಲಿಸುವುದು ಮತ್ತು ರೋದಿಸದಿರುವುದು (ಅಗತ್ಯ).
