إعدادات العرض
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು (ಮುಆದ್ ರನ್ನು) ಯಮನ್ಗೆ ಕಳುಹಿಸಿದಾಗ, ಹಸುಗಳ ಝಕಾತ್ ಆಗಿ,…
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು (ಮುಆದ್ ರನ್ನು) ಯಮನ್ಗೆ ಕಳುಹಿಸಿದಾಗ, ಹಸುಗಳ ಝಕಾತ್ ಆಗಿ, ಪ್ರತಿ ಮೂವತ್ತು ಹಸುಗಳಿಗೆ ಒಂದು ಗಂಡು ಅಥವಾ ಹೆಣ್ಣು ಕರುವನ್ನು (ಒಂದು ವರ್ಷ ಪ್ರಾಯದ್ದು),
ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು (ಮುಆದ್ ರನ್ನು) ಯಮನ್ಗೆ ಕಳುಹಿಸಿದಾಗ, ಹಸುಗಳ ಝಕಾತ್ ಆಗಿ, ಪ್ರತಿ ಮೂವತ್ತು ಹಸುಗಳಿಗೆ ಒಂದು ಗಂಡು ಅಥವಾ ಹೆಣ್ಣು ಕರುವನ್ನು (ಒಂದು ವರ್ಷ ಪ್ರಾಯದ್ದು), ಮತ್ತು ಪ್ರತಿ ನಲ್ವತ್ತು ಹಸುಗಳಿಗೆ ಒಂದು ಹಸುವನ್ನು (ಎರಡು ವರ್ಷ ಪ್ರಾಯದ್ದು) ತೆಗೆದುಕೊಳ್ಳಲು ಆದೇಶಿಸಿದರು. ಮತ್ತು (ತೆರಿಗೆಯ ವಿಷಯದಲ್ಲಿ) ಪ್ರತಿಯೊಬ್ಬ ಪ್ರೌಢಾವಸ್ಥೆಗೆ ತಲುಪಿದವನಿಂದ ಒಂದು ದೀನಾರ್, ಅಥವಾ ಅದಕ್ಕೆ ಸಮನಾದ ಮೌಲ್ಯದ ಯಮನ್ನ ಬಟ್ಟೆಯಾದ 'ಮಆಫಿರ್' ಅನ್ನು ತೆಗೆದುಕೊಳ್ಳಲು ಆದೇಶಿಸಿದರು.
الترجمة
العربية Bosanski English فارسی Français Русский हिन्दी 中文 Indonesia اردو Kurdî Português دری Македонски Tiếng Việt Magyar ქართული বাংলা ไทย অসমীয়া Hausa Nederlands ਪੰਜਾਬੀ Kiswahili ગુજરાતી Tagalog ភាសាខ្មែរ සිංහල मराठी മലയാളംالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಆದ್ ಇಬ್ನ್ ಜಬಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರನ್ನು ಜನರಿಗೆ ಕಲಿಸಲು ಮತ್ತು ಇಸ್ಲಾಂ ಧರ್ಮಕ್ಕೆ ಆಹ್ವಾನ ನೀಡಲು ಯಮನ್ಗೆ ಕಳುಹಿಸಿದರು. ಅವರು ಅವರಿಗೆ ಆದೇಶಿಸಿದ ವಿಷಯಗಳಲ್ಲಿ ಇದೂ ಒಂದಾಗಿತ್ತು: ಅವರು ಮುಸ್ಲಿಮರಿಂದ ಅವರ ಹಸುಗಳ ಝಕಾತ್ ಅನ್ನು ತೆಗೆದುಕೊಳ್ಳಬೇಕು. ಪ್ರತಿ ಮೂವತ್ತು ಹಸುಗಳಿಗೆ ಒಂದು ಗಂಡು ಕರು ಅಥವಾ ಹೆಣ್ಣು ಕರುವನ್ನು ತೆಗೆದುಕೊಳ್ಳಬೇಕು; ಅದು ಒಂದು ವರ್ಷ ಪೂರೈಸಿದ ಕರುವಾಗಿರಬೇಕು. ಮತ್ತು ಪ್ರತಿ ನಲ್ವತ್ತು ಹಸುಗಳಿಗೆ ಒಂದು ಹಸುವನ್ನು ತೆಗೆದುಕೊಳ್ಳಬೇಕು; ಅದು ಎರಡು ವರ್ಷ ಪೂರೈಸಿದ ಹಸುವಾಗಿರಬೇಕು. ಅವರು 'ಅಹ್ಲುಲ್ ಕಿತಾಬ್' ಗಳಾದ ಯಹೂದಿಗಳು ಮತ್ತು ಕ್ರೈಸ್ತರಿಂದ ಜಿಝ್ಯಾ (ತೆರಿಗೆ) ವನ್ನು, ಪ್ರತಿಯೊಬ್ಬ ಪ್ರೌಢಾವಸ್ಥೆಗೆ ತಲುಪಿದ ಪುರುಷನಿಂದ ಒಂದು ದೀನಾರ್, ಅಥವಾ ಒಂದು ದೀನಾರ್ಗೆ ಸಮನಾದ 'ಮಆಫಿರಿ' ಎಂದು ಕರೆಯಲಾಗುವ ಯಮನ್ನ ಬಟ್ಟೆಯನ್ನು ತೆಗೆದುಕೊಳ್ಳಬೇಕು ಎಂದು ಆದೇಶಿಸಿದರು.فوائد الحديث
'ಜಿಝ್ಯಾ' (ತೆರಿಗೆ) ವನ್ನು ಕೇವಲ ಪ್ರೌಢಾವಸ್ಥೆಗೆ ತಲುಪಿದವರಿಂದ ಮಾತ್ರ ತೆಗೆದುಕೊಳ್ಳಬೇಕು. ಜಿಝ್ಯಾ ತೆಗೆದುಕೊಳ್ಳುವ ಮಾನದಂಡವೇನೆಂದರೆ, ಯುದ್ಧದಲ್ಲಿ ಸೆರೆಸಿಕ್ಕಾಗ ಯಾರನ್ನು ಕೊಲ್ಲಲು ಅನುಮತಿಯಿಲ್ಲವೋ ಅವರಿಂದ ಜಿಝ್ಯಾ ತೆಗೆದುಕೊಳ್ಳಬಾರದು. ಉದಾಹರಣೆಗೆ ಚಿಕ್ಕ ಮಕ್ಕಳು, ಮಹಿಳೆಯರು ಮತ್ತು ಇತರರು.
ಜಿಝ್ಯಾದ ಪ್ರಮಾಣವನ್ನು ನಿರ್ಧರಿಸುವುದು ಮುಸ್ಲಿಂ ಧಾರ್ಮಿಕ ನಾಯಕ (ಆಡಳಿತಗಾರ)ನ ವಿವೇಚನೆಗೆ ಬಿಡಲಾಗುತ್ತದೆ. ಏಕೆಂದರೆ ಅದು ಸ್ಥಳ, ಕಾಲ, ಮತ್ತು ಶ್ರೀಮಂತಿಕೆ ಹಾಗೂ ಬಡತನದ ವ್ಯತ್ಯಾಸಕ್ಕೆ ಅನುಗುಣವಾಗಿ ಬದಲಾಗುತ್ತದೆ. ಇದಕ್ಕೆ ಪುರಾವೆಯೇನೆಂದರೆ, ಪ್ರವಾದಿಯವರೇ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಮನ್ ನಿವಾಸಿಗಳ ಮೇಲೆ ಅದನ್ನು ನಿರ್ಧರಿಸಿದರು ಮತ್ತು ಮುಆದ್ಗೆ ಹೇಳಿದರು: "ಪ್ರತಿಯೊಬ್ಬ ಪ್ರೌಢಾವಸ್ಥೆಗೆ ತಲುಪಿದವನಿಂದ ಒಂದು ದೀನಾರ್ ತೆಗೆದುಕೊ". ಆದರೆ, ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರು ಶಾಮ್ (ಸಿರಿಯಾ) ನಿವಾಸಿಗಳ ಮೇಲೆ ಜಿಝ್ಯಾ ನಿರ್ಧರಿಸಿದಾಗ ಅದನ್ನು ಹೆಚ್ಚಿಸಿದ್ದರು.
ಝಕಾತ್ ಸಂಗ್ರಹಣೆಯಲ್ಲಿ ಆಸಕ್ತಿ ವಹಿಸುವುದು, ಮತ್ತು ಅದನ್ನು ಸಂಗ್ರಹಿಸುವವರನ್ನು ನೇಮಿಸುವುದು 'ವಲಿಯ್ಯುಲ್ ಅಮ್ರ್' (ಆಡಳಿತಗಾರ) ನ ಜವಾಬ್ದಾರಿಗಳಲ್ಲಿ ಒಂದಾಗಿದೆ.
'ತಬೀಅ್' ಎಂದರೆ ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಟ್ಟ ಕರು. ಅದನ್ನು 'ತಬೀಅ್' (ಅನುಸರಿಸುವವನು) ಎಂದು ಕರೆಯಲು ಕಾರಣವೇನೆಂದರೆ, ಅದು ಇನ್ನೂ ತನ್ನ ತಾಯಿಯನ್ನು ಹಿಂಬಾಲಿಸುತ್ತಿರುತ್ತದೆ.
'ದೀನಾರ್' ಎಂದರೆ ಇದು ಚಿನ್ನದ ನಾಣ್ಯ. ಇಸ್ಲಾಮೀ ದೀನಾರ್ನ ತೂಕವು ನಾಲ್ಕು ಕಾಲು ಗ್ರಾಂ (4.25 ಗ್ರಾಂ) ಚಿನ್ನವಾಗಿದೆ.
التصنيفات
Zakah of Livestock