ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ! ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ!…

ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ! ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ! ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ!". ಕೇಳಲಾಯಿತು: "ಓ ಅಲ್ಲಾಹುವಿನ ಸಂದೇಶವಾಹಕರೇ, ಯಾರು?" ಅವರು ಹೇಳಿದರು: "ಯಾರ ಕೆಡುಕುಗಳಿಂದ ಅವನ ನೆರೆಯವನು ಸುರಕ್ಷಿತವಾಗಿರುವುದಿಲ್ಲವೋ ಅವನು

ಅಬೂ ಶುರೈಹ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ! ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ! ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ!". ಕೇಳಲಾಯಿತು: "ಓ ಅಲ್ಲಾಹುವಿನ ಸಂದೇಶವಾಹಕರೇ, ಯಾರು?" ಅವರು ಹೇಳಿದರು: "ಯಾರ ಕೆಡುಕುಗಳಿಂದ ಅವನ ನೆರೆಯವನು ಸುರಕ್ಷಿತವಾಗಿರುವುದಿಲ್ಲವೋ ಅವನು".

[صحيح] [رواه البخاري]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಆಣೆ ಮಾಡಿದರು ಮತ್ತು (ವಿಷಯದ ಗಂಭೀರತೆಯನ್ನು ವ್ಯಕ್ತಪಡಿಸಲು) ಅದನ್ನು ಮೂರು ಬಾರಿ ಪುನರುಚ್ಛರಿಸಿದರು. ನಂತರ ಅವರು ಹೇಳಿದರು: ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ, ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ, ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ. ಆಗ ಸಹಾಬಾಗಳು ಕೇಳಿದರು: ಓ ಅಲ್ಲಾಹುವಿನ ಸಂದೇಶವಾಹಕರೇ, ಸತ್ಯವಿಶ್ವಾಸಿಯಾಗದವರು ಯಾರು? ಅವರು ಹೇಳಿದರು: ಯಾರ ವಂಚನೆ, ಅನ್ಯಾಯ ಮತ್ತು ಕೆಡುಕನ್ನು ಅವನ ನೆರೆಯವನು ಭಯಪಡುತ್ತಾನೋ ಅವನು.

فوائد الحديث

ಯಾರ ಅನ್ಯಾಯ ಮತ್ತು ಕೆಡುಕಿನಿಂದ ಅವನ ನೆರೆಯವನು ಸುರಕ್ಷಿತವಾಗಿರುವುದಿಲ್ಲವೋ ಅವನಿಗೆ ಈಮಾನ್ (ವಿಶ್ವಾಸ) ಇಲ್ಲವೆಂದು ಬಣ್ಣಿಸಿರುವುದು; ಈ ಕೃತ್ಯವು ಮಹಾಪಾಪಗಳಲ್ಲಿ ಒಂದಾಗಿದೆ ಮತ್ತು ಅದನ್ನು ಮಾಡುವವನು ಈಮಾನ್‌ನಲ್ಲಿ ಅಪೂರ್ಣನಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ.

ನೆರೆಯವರಿಗೆ ಉಪಕಾರ ಮಾಡಲು ಮತ್ತು ಮಾತು ಅಥವಾ ಕೃತ್ಯದ ಮೂಲಕ ಅವರಿಗೆ ತೊಂದರೆ ನೀಡದಿರಲು ಬಲವಾಗಿ ಒತ್ತಾಯಿಸಲಾಗಿದೆ.

التصنيفات

ಸಂದಾನ ಮತ್ತು ನೆರೆಹೊರೆಯವರಿಗೆ ಸಂಬಂಧಿಸಿದ ನಿಯಮಗಳು