ಖಂಡಿತವಾಗಿಯೂ ಅಲ್ಲಾಹು 'ಫರಾಇದ್'ಗಳನ್ನು (ಕಡ್ಡಾಯ ಕರ್ತವ್ಯಗಳನ್ನು) ವಿಧಿಸಿದ್ದಾನೆ, ಆದ್ದರಿಂದ ಅವುಗಳನ್ನು ವ್ಯರ್ಥಮಾಡಬೇಡಿ…

ಖಂಡಿತವಾಗಿಯೂ ಅಲ್ಲಾಹು 'ಫರಾಇದ್'ಗಳನ್ನು (ಕಡ್ಡಾಯ ಕರ್ತವ್ಯಗಳನ್ನು) ವಿಧಿಸಿದ್ದಾನೆ, ಆದ್ದರಿಂದ ಅವುಗಳನ್ನು ವ್ಯರ್ಥಮಾಡಬೇಡಿ (ನಿರ್ಲಕ್ಷಿಸಬೇಡಿ). ಅವನು 'ಹುದೂದ್'‌ಗಳನ್ನು (ಮಿತಿಗಳನ್ನು) ನಿಗದಿಪಡಿಸಿದ್ದಾನೆ, ಆದ್ದರಿಂದ ಅವುಗಳನ್ನು ಮೀರಿಹೋಗಬೇಡಿ. ಅವನು ಕೆಲವು ವಿಷಯಗಳನ್ನು 'ಹರಾಮ್' (ನಿಷಿದ್ಧ) ಮಾಡಿದ್ದಾನೆ, ಆದ್ದರಿಂದ ಅವುಗಳನ್ನು ಉಲ್ಲಂಘಿಸಬೇಡಿ. ಅವನು ಕೆಲವು ವಿಷಯಗಳ ಬಗ್ಗೆ - ಮರೆವಿನಿಂದಲ್ಲ, ಬದಲಿಗೆ ನಿಮ್ಮಲ್ಲಿರುವ ಕರುಣೆಯಿಂದಾಗಿ - ಮೌನವಾಗಿದ್ದಾನೆ, ಆದ್ದರಿಂದ ಅವುಗಳ ಬಗ್ಗೆ (ಅನಗತ್ಯವಾಗಿ) ಸಂಶೋಧನೆ ಮಾಡಬೇಡಿ (ಕೆದಕಬೇಡಿ)

ಅಬೂ ಸಅಲಬಾ ಅಲ್-ಖುಶನೀ ಜುರ್ಸೂಮ್ ಇಬ್ನ್ ನಾಶಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಅಲ್ಲಾಹು 'ಫರಾಇದ್'ಗಳನ್ನು (ಕಡ್ಡಾಯ ಕರ್ತವ್ಯಗಳನ್ನು) ವಿಧಿಸಿದ್ದಾನೆ, ಆದ್ದರಿಂದ ಅವುಗಳನ್ನು ವ್ಯರ್ಥಮಾಡಬೇಡಿ (ನಿರ್ಲಕ್ಷಿಸಬೇಡಿ). ಅವನು 'ಹುದೂದ್'‌ಗಳನ್ನು (ಮಿತಿಗಳನ್ನು) ನಿಗದಿಪಡಿಸಿದ್ದಾನೆ, ಆದ್ದರಿಂದ ಅವುಗಳನ್ನು ಮೀರಿಹೋಗಬೇಡಿ. ಅವನು ಕೆಲವು ವಿಷಯಗಳನ್ನು 'ಹರಾಮ್' (ನಿಷಿದ್ಧ) ಮಾಡಿದ್ದಾನೆ, ಆದ್ದರಿಂದ ಅವುಗಳನ್ನು ಉಲ್ಲಂಘಿಸಬೇಡಿ. ಅವನು ಕೆಲವು ವಿಷಯಗಳ ಬಗ್ಗೆ - ಮರೆವಿನಿಂದಲ್ಲ, ಬದಲಿಗೆ ನಿಮ್ಮಲ್ಲಿರುವ ಕರುಣೆಯಿಂದಾಗಿ - ಮೌನವಾಗಿದ್ದಾನೆ, ಆದ್ದರಿಂದ ಅವುಗಳ ಬಗ್ಗೆ (ಅನಗತ್ಯವಾಗಿ) ಸಂಶೋಧನೆ ಮಾಡಬೇಡಿ (ಕೆದಕಬೇಡಿ)".

[قال النووي: حديث حسن] [رواه الدارقطني في سننه وغيره]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅಲ್ಲಾಹು ಕೆಲವು ವಿಷಯಗಳನ್ನು ಕಡ್ಡಾಯಗೊಳಿಸಿದ್ದಾನೆ ಮತ್ತು 'ಫರಾಇದ್'ಗಳನ್ನು (ಕಡ್ಡಾಯ ಕರ್ತವ್ಯಗಳನ್ನು) ವಿಧಿಸಿದ್ದಾನೆ. ಆದ್ದರಿಂದ ಅವುಗಳಿಗೆ ಬದ್ಧರಾಗಿರಿ ಮತ್ತು ಅವುಗಳನ್ನು ಬಿಟ್ಟುಬಿಡುವ ಮೂಲಕ ಅಥವಾ ಅವುಗಳ ಬಗ್ಗೆ ಉದಾಸೀನತೆ ತೋರುವ ಮೂಲಕ ಅವುಗಳಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಅವನು ತನಗೆ ಇಷ್ಟವಿಲ್ಲದ ವಿಷಯಗಳಿಂದ ನಿಮ್ಮನ್ನು ತಡೆಯಲು ಮತ್ತು ದೂರವಿಡಲು ನಿಮಗಾಗಿ ನಿರ್ದಿಷ್ಟಪಡಿಸಿದ ತಡೆಗೋಡೆಗಳನ್ನು ಮತ್ತು ನಿರೋಧಕಗಳನ್ನು ಇರಿಸಿದ್ದಾನೆ. ಆದ್ದರಿಂದ ಶರೀಅತ್ ಆದೇಶಿಸಿದ್ದನ್ನು ಮೀರಿ ಅವುಗಳಲ್ಲಿ ಹೆಚ್ಚುವರಿ ಮಾಡಲು ಹೋಗಬೇಡಿ. ಅವನು 'ಮುಹರ್ರಮಾತ್' (ನಿಷಿದ್ಧ ಕಾರ್ಯಗಳನ್ನು) ನಿಷೇಧಿಸಿದ್ದಾನೆ. ಆದ್ದರಿಂದ ಅವುಗಳನ್ನು ತೆಗೆದುಕೊಳ್ಳಬೇಡಿ ಅಥವಾ ಅವುಗಳ ಹತ್ತಿರ ಹೋಗಬೇಡಿ. ಇವುಗಳ ಹೊರತಾಗಿ ಉಳಿದ ವಿಷಯಗಳನ್ನು ಅವನು ತನ್ನ ದಾಸರ ಮೇಲಿನ ಕರುಣೆಯಿಂದಾಗಿ ಬಿಟ್ಟುಬಿಟ್ಟಿದ್ದಾನೆ ಮತ್ತು ಅವುಗಳ ಬಗ್ಗೆ ಮೌನವಾಗಿದ್ದಾನೆ. ಆದ್ದರಿಂದ ಅವುಗಳು 'ಅನುಮತಿಸಲಾಗಿದೆ' ಎಂಬ ಮೂಲನಿಯಮದಲ್ಲಿಯೇ ಉಳಿಯುತ್ತವೆ. ಅವುಗಳ ಬಗ್ಗೆ (ಅನಗತ್ಯವಾಗಿ) ಸಂಶೋಧನೆ ಮಾಡಬೇಡಿ.

فوائد الحديث

ಅಲ್ಲಾಹನೇ ಶಾಸನಕರ್ತ (ನಿಯಮಗಳನ್ನು ವಿಧಿಸುವವನು) ಮತ್ತು ಆದೇಶವು ಪರಿಶುದ್ಧನಾದ ಅವನ ಕೈಯಲ್ಲಿದೆ ಎಂಬುದಕ್ಕೆ ಈ ಹದೀಸ್ ಪುರಾವೆಯಾಗಿದೆ.

ಈ ಹದೀಸ್ ಶರೀಅತ್‌ನ ನಿಯಮಗಳನ್ನು - ನಿಯಮ ಮತ್ತು ಅನುಮತಿಯ ದೃಷ್ಟಿಯಿಂದ - ಒಳಗೊಂಡಿದೆ. ಏಕೆಂದರೆ ಶರೀಅತ್‌ನ ನಿಯಮವು ಒಂದೋ ಮೌನವಹಿಸಲಾಗಿರುತ್ತದೆ ಅಥವಾ ಅದರ ಬಗ್ಗೆ ಮಾತನಾಡಲಾಗಿರುತ್ತದೆ. ಮಾತನಾಡಲಾಗಿರುವವುಗಳು ಒಂದೋ ಕಡ್ಡಾಯವಾಗಿ ಅಥವಾ ಅಪೇಕ್ಷಣೀಯವಾಗಿ ಆದೇಶಿಸಲಾದ ಕಾರ್ಯವಾಗಿರಬಹುದು, ಅಥವಾ ನಿಷಿದ್ಧವಾಗಿ ಅಥವಾ ಅನಪೇಕ್ಷಿತವಾಗಿ (ಮಕ್ರೂಹ್) ನಿಷೇಧಿಸಲಾದ ಕಾರ್ಯವಾಗಿರಬಹುದು, ಅಥವಾ ಅನುಮತಿಸಲಾದ ಕಾರ್ಯವಾಗಿರಬಹುದು.

ಅಲ್ಲಾಹು ಮೌನವಹಿಸಿರುವ, ಕಡ್ಡಾಯಗೊಳಿಸಿಲ್ಲದ, ಮಿತಿ ನಿಗದಿಪಡಿಸಿಲ್ಲದ, ಮತ್ತು ನಿಷೇಧಿಸಿಲ್ಲದ ವಿಷಯಗಳೆಲ್ಲವೂ ಹಲಾಲ್ (ಅನುಮತಿಸಲ್ಪಟ್ಟಿದ್ದು) ಆಗಿವೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತಮವಾದ ವಿವರಣಾ ಶೈಲಿಯನ್ನು ತಿಳಿಸಲಾಗಿದೆ. ಅದು ಹೇಗೆಂದರೆ ಅವರು ಹದೀಸ್ ಅನ್ನು ಇಂತಹ ಸ್ಪಷ್ಟ ಮತ್ತು ನಿಖರವಾದ ವಿಭಾಗಗಳೊಂದಿಗೆ ತಿಳಿಸಿಕೊಟ್ಟಿದ್ದಾರೆ.

ಅಲ್ಲಾಹನು ಕಡ್ಡಾಯಗೊಳಿಸಿದ ವಿಷಯಗಳನ್ನು (ನಿರ್ವಹಿಸುವ ಮೂಲಕ) ಕಾಪಾಡುವುದು ಕಡ್ಡಾಯವಾಗಿದೆ.

ಅಲ್ಲಾಹನ 'ಹುದೂದ್'‌ಗಳನ್ನು (ಮಿತಿಗಳನ್ನು) ಮೀರುವುದು ನಿಷಿದ್ಧವಾಗಿದೆ.

التصنيفات

ಹುದುದ್ (ಶರಿಯಾ ಶಿಕ್ಷೆ)