إعدادات العرض
ಒಂದು ವೇಳೆ ನಾನು ಕಡ್ಡಾಯಗೊಳಿಸಲ್ಪಟ್ಟ ನಮಾಝ್ಗಳನ್ನು ನಿರ್ವಹಿಸಿದರೆ, ರಮದಾನ್ನಲ್ಲಿ ಉಪವಾಸ ಆಚರಿಸಿದರೆ, ಹಲಾಲ್ ಅನ್ನು ಹಲಾಲ್…
ಒಂದು ವೇಳೆ ನಾನು ಕಡ್ಡಾಯಗೊಳಿಸಲ್ಪಟ್ಟ ನಮಾಝ್ಗಳನ್ನು ನಿರ್ವಹಿಸಿದರೆ, ರಮದಾನ್ನಲ್ಲಿ ಉಪವಾಸ ಆಚರಿಸಿದರೆ, ಹಲಾಲ್ ಅನ್ನು ಹಲಾಲ್ ಎಂದು (ಪರಿಗಣಿಸಿ) ಅನುಸರಿಸಿದರೆ, ಹರಾಮ್ ಅನ್ನು ಹರಾಮ್ ಎಂದು (ಪರಿಗಣಿಸಿ) ತ್ಯಜಿಸಿದರೆ
ಅಬೂ ಅಬ್ದುಲ್ಲಾ ಜಾಬಿರ್ ಇಬ್ನ್ ಅಬ್ದುಲ್ಲಾ ಅಲ್-ಅನ್ಸಾರಿ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದನು: "ಒಂದು ವೇಳೆ ನಾನು ಕಡ್ಡಾಯಗೊಳಿಸಲ್ಪಟ್ಟ ನಮಾಝ್ಗಳನ್ನು ನಿರ್ವಹಿಸಿದರೆ, ರಮದಾನ್ನಲ್ಲಿ ಉಪವಾಸ ಆಚರಿಸಿದರೆ, ಹಲಾಲ್ ಅನ್ನು ಹಲಾಲ್ ಎಂದು (ಪರಿಗಣಿಸಿ) ಅನುಸರಿಸಿದರೆ, ಹರಾಮ್ ಅನ್ನು ಹರಾಮ್ ಎಂದು (ಪರಿಗಣಿಸಿ) ತ್ಯಜಿಸಿದರೆ, ಮತ್ತು ಅದರ ಮೇಲೆ ಏನನ್ನೂ ಹೆಚ್ಚಿಸದಿದ್ದರೆ (ಐಚ್ಛಿಕ ಕಾರ್ಯಗಳನ್ನು ಮಾಡದಿದ್ದರೆ), ನಾನು ಸ್ವರ್ಗವನ್ನು ಪ್ರವೇಶಿಸುವೆನೇ?" ಅವರು (ಪ್ರವಾದಿ) ಹೇಳಿದರು: "ಹೌದು".
الترجمة
العربية Español አማርኛ English اردو Indonesia বাংলা Français Türkçe Русский Bosanski සිංහල हिन्दी 中文 فارسی Tiếng Việt Tagalog Kurdî Hausa Português മലയാളം తెలుగు Kiswahili தமிழ் မြန်မာ ไทย Deutsch پښتو অসমীয়া Shqip Nederlands ગુજરાતી Кыргызча नेपाली Lietuvių دری Српски тоҷикӣ Kinyarwanda Română Magyar Čeština Moore Malagasy Oromoo Wolof Azərbaycan O‘zbek Українська ქართული Македонски ភាសាខ្មែរ Bambara ਪੰਜਾਬੀ मराठी Kirundi Kurmancî Bahasa Melayuالشرح
ಈ ಹದೀಸ್ನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಒಬ್ಬ ವ್ಯಕ್ತಿ ಯಾವುದೇ ಐಚ್ಛಿಕ ನಮಾಝ್ಗಳನ್ನು ನಿರ್ವಹಿಸದೆ ಕೇವಲ ಐದು ವೇಳೆಯ ಕಡ್ಡಾಯ ನಮಾಝ್ಗಳನ್ನು ಮಾತ್ರ ನಿರ್ವಹಿಸಿದರೆ, ಮತ್ತು ಯಾವುದೇ ಐಚ್ಚಿಕ ಉಪವಾಸಗಳನ್ನು ಆಚರಿಸದೆ ಕೇವಲ ರಮದಾನ್ ತಿಂಗಳಲ್ಲಿ ಮಾತ್ರ ಉಪವಾಸ ಆಚರಿಸಿದರೆ, ಮತ್ತು ಧರ್ಮಸಮ್ಮತವಾಗಿರುವುದನ್ನು ಧರ್ಮಸಮ್ಮತವೆಂದು ಪರಿಗಣಿಸಿ ಅವುಗಳನ್ನು ನಿರ್ವಹಿಸಿದರೆ, ಮತ್ತು ಧರ್ಮನಿಷಿದ್ಧವಾಗಿರುವುದನ್ನು ಧರ್ಮನಿಷಿದ್ಧವೆಂದು ಪರಿಗಣಿಸಿ, ಅವುಗಳಿಂದ ದೂರ ಸರಿದರೆ, ಅವನು ಖಂಡಿತವಾಗಿಯೂ ಸ್ವರ್ಗಕ್ಕೆ ಹೋಗುತ್ತಾನೆ.فوائد الحديث
ಕಡ್ಡಾಯ ಕಾರ್ಯಗಳನ್ನು ನಿರ್ವಹಿಸಲು ಮತ್ತು ನಿಷೇಧಿಸಲಾದ ಕಾರ್ಯಗಳನ್ನು ತೊರೆಯಲು ಮುಸಲ್ಮಾನನು ಉತ್ಸಾಹ ತೋರಬೇಕು, ಹಾಗೂ ಸ್ವರ್ಗ ಪ್ರವೇಶವು ಅವನ ಗುರಿಯಾಗಿರಬೇಕೆಂದು ಈ ಹದೀಸ್ ತಿಳಿಸುತ್ತದೆ.
ಧರ್ಮಸಮ್ಮತವಾಗಿರುವ ಕಾರ್ಯಗಳನ್ನು ಮಾಡುವುದು ಮತ್ತು ಅವು ಧರ್ಮಸಮ್ಮತವೆಂದು ನಂಬುವುದರ ಮಹತ್ವವನ್ನು, ಹಾಗೆಯೇ ಧರ್ಮವು ನಿಷೇಧಿಸಿದ ಕಾರ್ಯಗಳಿಂದ ದೂರ ಸರಿಯುವುದು ಮತ್ತು ಅವು ಧರ್ಮನಿಷಿದ್ಧವೆಂದು ನಂಬುವುದರ ಮಹತ್ವವನ್ನು ಈ ಹದೀಸ್ ತಿಳಿಸುತ್ತದೆ.
ಕಡ್ಡಾಯ ಕಾರ್ಯಗಳನ್ನು ನಿರ್ವಹಿಸುವುದು ಮತ್ತು ನಿಷೇಧಿತ ಕಾರ್ಯಗಳಿಂದ ದೂರವಾಗುವುದು ಸ್ವರ್ಗ ಪ್ರವೇಶಕ್ಕೆ ಕಾರಣವೆಂದು ಈ ಹದೀಸ್ ತಿಳಿಸುತ್ತದೆ.
