إعدادات العرض
ನೀವು ಏನು ಹೇಳುತ್ತಿದ್ದೀರೋ ಮತ್ತು ಯಾವುದರ ಕಡೆಗೆ ಕರೆಯುತ್ತಿದ್ದೀರೋ ಅದು ಬಹಳ ಸುಂದರವಾಗಿದೆ. ನಾವು ಮಾಡಿದ ತಪ್ಪುಗಳಿಗೆ ಏನಾದರೂ…
ನೀವು ಏನು ಹೇಳುತ್ತಿದ್ದೀರೋ ಮತ್ತು ಯಾವುದರ ಕಡೆಗೆ ಕರೆಯುತ್ತಿದ್ದೀರೋ ಅದು ಬಹಳ ಸುಂದರವಾಗಿದೆ. ನಾವು ಮಾಡಿದ ತಪ್ಪುಗಳಿಗೆ ಏನಾದರೂ ಪರಿಹಾರವಿದೆಯೇ ಎಂದು ತಿಳಿಸಿ
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: "ಬಹಳಷ್ಟು ಕೊಲೆಗಳನ್ನು ಮಾಡಿದ ಮತ್ತು ಬಹಳಷ್ಟು ವ್ಯಭಿಚಾರಗಳನ್ನು ಮಾಡಿದ ಕೆಲವು ಬಹುದೇವವಿಶ್ವಾಸಿಗಳು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ನೀವು ಏನು ಹೇಳುತ್ತಿದ್ದೀರೋ ಮತ್ತು ಯಾವುದರ ಕಡೆಗೆ ಕರೆಯುತ್ತಿದ್ದೀರೋ ಅದು ಬಹಳ ಸುಂದರವಾಗಿದೆ. ನಾವು ಮಾಡಿದ ತಪ್ಪುಗಳಿಗೆ ಏನಾದರೂ ಪರಿಹಾರವಿದೆಯೇ ಎಂದು ತಿಳಿಸಿ." ಆಗ ಈ ವಚನವು ಅವತೀರ್ಣವಾಯಿತು: "ಯಾರು ಅಲ್ಲಾಹನ ಜೊತೆಗೆ ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸುವುದಿಲ್ಲವೋ, ಕಾನೂನುಬದ್ಧ ರೀತಿಯಲ್ಲೇ ಹೊರತು ಅಲ್ಲಾಹು (ಕೊಲ್ಲುವುದನ್ನು) ನಿಷೇಧಿಸಿದ ಜೀವವನ್ನು ಕೊಲ್ಲುವುದಿಲ್ಲವೋ ಮತ್ತು ವ್ಯಭಿಚಾರ ಮಾಡುವುದಿಲ್ಲವೋ." [ಫುರ್ಕಾನ್ 68] ಮತ್ತು ಈ ವಚನ ಅವತೀರ್ಣವಾಯಿತು: "ಹೇಳಿರಿ: ಸ್ವಯಂ ಅತಿರೇಕವೆಸಗಿದ ನನ್ನ ದಾಸರೇ! ಅಲ್ಲಾಹನ ದಯೆಯ ಬಗ್ಗೆ ನಿರಾಶರಾಗಬೇಡಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ಪಾಪಗಳನ್ನೂ ಕ್ಷಮಿಸುತ್ತಾನೆ. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ." [ಝುಮರ್ 53].
الترجمة
العربية English မြန်မာ Svenska Čeština ગુજરાતી Yorùbá Nederlands اردو Bahasa Indonesia ئۇيغۇرچە বাংলা Türkçe සිංහල हिन्दी Tiếng Việt Hausa తెలుగు Kiswahili پښتو অসমীয়া دری Кыргызча Lietuvių Kinyarwanda नेपाली മലയാളം Bosanski Kurdî Oromoo Română Shqip Soomaali Српски Wolof Moore Українська Tagalog தமிழ் Azərbaycan فارسی ქართული 中文 Magyar Português Deutsch Македонски Русский bm አማርኛ Malagasyالشرح
ಬಹಳಷ್ಟು ಕೊಲೆ ಮತ್ತು ವ್ಯಭಿಚಾರಗಳನ್ನು ಮಾಡಿದ ಕೆಲವು ಬಹುದೇವಾರಾಧಕರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ನೀವು ಕರೆಯುತ್ತಿರುವ ಇಸ್ಲಾಂ ಮತ್ತು ಅದರ ಬೋಧನೆಗಳು ಬಹಳ ಸುಂದರವಾಗಿವೆ. ಆದರೆ ನಾವು ಮಾಡಿದ ಬಹುದೇವಾರಾಧನೆ ಮತ್ತು ಮಹಾಪಾಪಗಳಿಗೆ ಪರಿಹಾರವಿದೆಯೇ? ಆಗ ಎರಡು ವಚನಗಳು ಅವತೀರ್ಣವಾದವು. ಅಲ್ಲಾಹು ಜನರಿಂದ, ಅವರ ಪಾಪಗಳ ಹೆಚ್ಚಳ ಮತ್ತು ಗಂಭೀರತೆಯ ಹೊರತಾಗಿಯೂ, ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಅವನು ಹೀಗೆ ಮಾಡದಿರುತ್ತಿದ್ದರೆ ಅವರು ತಮ್ಮ ಸತ್ಯನಿಷೇಧ ಮತ್ತು ಅತಿರೇಕದಲ್ಲಿ ಮುಂದುವರಿಯುತ್ತಿದ್ದರು ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಿರಲಿಲ್ಲ.فوائد الحديث
ಇಸ್ಲಾಂ ಧರ್ಮದ ಶ್ರೇಷ್ಠತೆ ಮತ್ತು ಮಹಾತ್ಮೆಯನ್ನು ಮತ್ತು ಇಸ್ಲಾಂ ಅದಕ್ಕಿಂತ ಮೊದಲಿನ ಎಲ್ಲಾ ಪಾಪಗಳನ್ನು ಅಳಿಸುತ್ತದೆ ಎಂದು ತಿಳಿಸಲಾಗಿದೆ.
ಅಲ್ಲಾಹನ ಕರುಣೆ ಮತ್ತು ಕ್ಷಮೆಯ ವಿಶಾಲತೆಯನ್ನು ತಿಳಿಸಲಾಗಿದೆ.
ಶಿರ್ಕ್, ಕಾನೂನುಬಾಹಿರ ಹತ್ಯೆ, ವ್ಯಭಿಚಾರವನ್ನು ನಿಷೇಧಿಸಲಾಗಿದೆ ಮತ್ತು ಈ ಪಾಪವೆಸಗುವವರಿಗೆ ಉಗ್ರ ಎಚ್ಚರಿಕೆ ನೀಡಲಾಗಿದೆ.
ನಿಷ್ಕಳಂಕತೆ ಮತ್ತು ಸತ್ಕರ್ಮಗಳಿಂದ ಕೂಡಿದ ಪ್ರಾಮಾಣಿಕ ಪಶ್ಚಾತ್ತಾಪವು ಸತ್ಯನಿಷೇಧ ಸೇರಿದಂತೆ ಎಲ್ಲಾ ಮಹಾಪಾಪಗಳನ್ನು ಅಳಿಸುತ್ತದೆ.
ಅಲ್ಲಾಹನ ಕರುಣೆಯ ಬಗ್ಗೆ ನಿರಾಶರಾಗುವುದನ್ನು ಮತ್ತು ಹತಾಶೆ ವ್ಯಕ್ತಪಡಿಸುವುದನ್ನು ನಿಷೇಧಿಸಲಾಗಿದೆ.