إعدادات العرض
ನಿನಗೆ ಸಂಶಯವನ್ನುಂಟುಮಾಡುವುದನ್ನು, ನಿನಗೆ ಸಂಶಯವನ್ನುಂಟುಮಾಡದ ವಿಷಯಕ್ಕಾಗಿ ತ್ಯಜಿಸು
ನಿನಗೆ ಸಂಶಯವನ್ನುಂಟುಮಾಡುವುದನ್ನು, ನಿನಗೆ ಸಂಶಯವನ್ನುಂಟುಮಾಡದ ವಿಷಯಕ್ಕಾಗಿ ತ್ಯಜಿಸು
ಅಬೂ ಮುಹಮ್ಮದ್ ಅಲ್-ಹಸನ್ ಇಬ್ನ್ ಅಲೀ ಇಬ್ನ್ ಅಬೀ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) - ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೊಮ್ಮಗ ಮತ್ತು ಅವರ 'ರೈಹಾನ್' (ಪ್ರೀತಿಯ ಸುಗಂಧ ಪುಷ್ಪ) - ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದನ್ನು ಕಂಠಪಾಠ ಮಾಡಿದ್ದೇನೆ: "ನಿನಗೆ ಸಂಶಯವನ್ನುಂಟುಮಾಡುವುದನ್ನು, ನಿನಗೆ ಸಂಶಯವನ್ನುಂಟುಮಾಡದ ವಿಷಯಕ್ಕಾಗಿ ತ್ಯಜಿಸು".
الترجمة
العربية Español አማርኛ English اردو Indonesia বাংলা Français Türkçe Русский Bosanski සිංහල हिन्दी 中文 فارسی Tiếng Việt Tagalog Kurdî Hausa Português മലയാളം తెలుగు Kiswahili தமிழ் ไทย Deutsch پښتو অসমীয়া Shqip Nederlands ગુજરાતી Кыргызча नेपाली Lietuvių دری Српски тоҷикӣ Kinyarwanda Română Magyar Čeština Moore Malagasy Oromoo Wolof Azərbaycan O‘zbek Українська ქართული Македонски ភាសាខ្មែរ ਪੰਜਾਬੀ मराठी Kirundi Kurmancî Bahasa Melayu မြန်မာالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆದೇಶಿಸುವುದೇನೆಂದರೆ, ನಿಮಗೆ ಯಾವುದಾದರೂ ಮಾತುಗಳು ಮತ್ತು ಕಾರ್ಯಗಳ ಬಗ್ಗೆ ಸಂಶಯವಿದ್ದರೆ (ಅಂದರೆ, ಅದು ನಿಷಿದ್ಧವಾಗಿರಬಹುದೋ ಅಲ್ಲವೋ, ಹರಾಮ್ ಆಗಿರಬಹುದೋ ಅಥವಾ ಹಲಾಲ್ ಆಗಿರಬಹುದೋ ಎಂದು ಸಂಶಯವಿದ್ದರೆ), ಅದನ್ನು ಬಿಟ್ಟುಬಿಡಿ, ಮತ್ತು ಯಾವುದರ ಕುರಿತು ಅದು ಒಳಿತಾಗಿದೆ ಮತ್ತು ಅದನ್ನು ಮಾಡಲು ಅನುಮತಿಯಿದೆ ಎಂದು ನಿಮಗೆ ಖಾತ್ರಿಯಿದೆಯೋ (ಅಂದರೆ, ಅದರ ಬಗ್ಗೆ ಯಾವುದೇ ಸಂಶಯವಿಲ್ಲವೋ), ಅದನ್ನು ನಿರ್ವಹಿಸಿರಿ.فوائد الحديث
ಮುಸಲ್ಮಾನನು ದೃಢ ತಿಳುವಳಿಕೆಯ ಆಧಾರದಲ್ಲಿ ಕರ್ಮವೆಸಗಬೇಕು ಮತ್ತು ಸಂಶಯವಿರುವ ಕಾರ್ಯಗಳನ್ನು ಬಿಟ್ಟುಬಿಡಬೇಕು. ಧರ್ಮದ ವಿಷಯದಲ್ಲಿ ಒಳನೋಟವನ್ನು ಹೊಂದಿರಬೇಕು.
ಸಂಶಯಗಳಲ್ಲಿ ಒಳಪಡುವುದನ್ನು ನಿಷೇಧಿಸಲಾಗಿದೆ.
ನಿಶ್ಚಿಂತೆ ಮತ್ತು ಸಮಾಧಾನ ಬೇಕಾದರೆ ಸಂಶಯವಿರುವ ಕಾರ್ಯಗಳನ್ನು ಬಿಟ್ಟುಬಿಡಬೇಕು.
ಅಲ್ಲಾಹನಿಗೆ ಮನುಷ್ಯರ ಮೇಲಿರುವ ದಯೆಯನ್ನು ತಿಳಿಸಲಾಗಿದೆ. ಏಕೆಂದರೆ, ಅವನು ಮನಸ್ಸಿಗೆ ನೆಮ್ಮದಿ ನೀಡುವ ಕಾರ್ಯಗಳನ್ನು ಆದೇಶಿಸಿದ್ದಾನೆ ಮತ್ತು ಮನಸ್ಸಿಗೆ ಆತಂಕ ಮತ್ತು ಚಿಂತೆ ತರುವ ವಿಷಯಗಳನ್ನು ನಿಷೇಧಿಸಿದ್ದಾನೆ.
