ಯಾವುದೇ ಹಾನಿ ಅಥವಾ ಪ್ರತೀಕಾರದ ಹಾನಿ ಇರಬಾರದು

ಯಾವುದೇ ಹಾನಿ ಅಥವಾ ಪ್ರತೀಕಾರದ ಹಾನಿ ಇರಬಾರದು

ಅಬೂ ಸಈದ್ ಸಅದ್ ಇಬ್ನ್ ಮಾಲಿಕ್ ಇಬ್ನ್ ಸಿನಾನ್ ಅಲ್-ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾವುದೇ ಹಾನಿ ಅಥವಾ ಪ್ರತೀಕಾರದ ಹಾನಿ ಇರಬಾರದು."

[حسن] [رواه ابن ماجه والدارقطني وغيرهما مسندًا]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ತನ್ನಿಂದ ಮತ್ತು ಇತರರಿಂದ ವಿವಿಧ ತರಹ ಮತ್ತು ರೂಪಗಳಲ್ಲಿರುವ ಹಾನಿಯನ್ನು ತಡೆಯುವುದು ಕಡ್ಡಾಯವಾಗಿದೆ. ಆದ್ದರಿಂದ, ತನಗಾಗಲಿ, ಇತರರಿಗಾಗಲಿ ಯಾರಿಗೂ ಹಾನಿ ಮಾಡಲು ಅನುಮತಿಯಿಲ್ಲ. ಹಾಗೆಯೇ, ಹಾನಿಯನ್ನು ಹಾನಿಯಿಂದ ಎದುರಿಸಲು ಕೂಡ ಅನುಮತಿಯಿಲ್ಲ. ಏಕೆಂದರೆ ಹಾನಿಯನ್ನು ಹಾನಿಯಿಂದ ನಿವಾರಿಸಲಾಗುವುದಿಲ್ಲ. ಆದರೆ ಮಿತಿಮೀರದ ರೂಪದಲ್ಲಿ 'ಖಿಸಾಸ್' (ಸಮನಾದುದಕ್ಕೆ ಸಮನಾದ ಪ್ರತೀಕಾರ) ನ ರೀತಿಯಲ್ಲಿ ಹೊರತು.

فوائد الحديث

ತೊಂದರೆ ಅನುಭವಿಸಿದ್ದಕ್ಕಿಂದ ಹೆಚ್ಚು ತೊಂದರೆ ಕೊಡುವ ಮೂಲಕ ಪ್ರತಿಕ್ರಿಯಿಸುವುದನ್ನು ಈ ಹದೀಸಿನಲ್ಲಿ ನಿಷೇಧಿಸಲಾಗಿದೆ.

ದಾಸರಿಗೆ ತೊಂದರೆಯಾಗುವ ಯಾವುದೇ ಕಾರ್ಯವನ್ನೂ ಅಲ್ಲಾಹು ಆಜ್ಞಾಪಿಸಿಲ್ಲ.

ಮಾತಿನ ಮೂಲಕ, ಕೃತಿಯ ಮೂಲಕ ಅಥವಾ (ಕಾರ್ಯವನ್ನು) ತ್ಯಜಿಸುವ ಮೂಲಕ ಹಾನಿ ಮಾಡುವುದು ಮತ್ತು ಪ್ರತೀಕಾರವಾಗಿ ಹಾನಿ ಮಾಡುವುದನ್ನು ನಿಷೇಧಿಸುವಲ್ಲಿ ಈ ಹದೀಸ್ ಒಂದು ಮೂಲಭೂತ ನಿಯಮವಾಗಿದೆ.

"ತೊಂದರೆಯನ್ನು ನಿವಾರಿಸಬೇಕು" ಎಂಬುದು ಇಸ್ಲಾಂ ಧರ್ಮದ ಸಿದ್ಧಾಂತಗಳಲ್ಲಿ ಒಂದಾಗಿದೆ. ಇಸ್ಲಾಂ ಧರ್ಮವು ತೊಂದರೆಯನ್ನು ಅಂಗೀಕರಿಸುವುದಿಲ್ಲ ಮತ್ತು ತೊಂದರೆ ಕೊಡುವುದನ್ನು ಕೂಡ ಅದು ಖಂಡಿಸುತ್ತದೆ.